‘ಕಿರಿಯ ಮಗ ರಾಮಮೋಹನ್ ರಾವ್ ನನ್ನ ಹೆಸರಿನಲ್ಲಿದ್ದ ಮನೆಯನ್ನು ತನ್ನ ಪತ್ನಿ ಲತಾಬಾಯಿ ಹೆಸರಿಗೆ ಬರೆಸಿಕೊಂಡು ಬೀದಿಪಾಲು ಮಾಡಿದ್ದಾನೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗೆ ದೂರು ನೀಡಿದ್ದೆ. ದೂರಿನ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಯು ಮಗನಿಂದ ಮನೆ ಬಿಡಿಸಿಕೊಡುವಂತೆ ಆದೇಶ ಮಾಡಿದ್ದಾರೆ. ಆದರೆ, ಪೊಲೀಸರು ಆದೇಶ ಪಾಲಿಸುತ್ತಿಲ್ಲ’ ಎಂದು ರಾಧಾಬಾಯಿ ಕಣ್ಣೀರಿಟ್ಟರು.