ಇಲ್ಲಿ ಸೋಮವಾರ ನಡೆದ ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಆಶಯ ಮಾತುಗಳನ್ನಾಡಿದ ಅವರು, 'ಕಟುಕ ಮತ್ತು ಸರ್ಜನ್ (ಶಸ್ತ್ರಚಿಕಿತ್ಸಕ) ಇಬ್ಬರದ್ದೂ ಕತ್ತರಿಸುವ ಕೆಲಸ. ಆದರೆ ಕಟುಕ ಜೀವ ತೆಗೆದರೆ, ಶಸ್ತ್ರಚಿಕಿತ್ಸಕ ಜೀವ ಉಳಿಸುತ್ತಾನೆ. ಈಗ ಇಂಥ ಜೀವ ಉಳಿಸುವ ಶಸ್ತ್ರಚಿಕಿತ್ಸಕ ರಾಜಕಾರಣ ಮತ್ತು ಚಿಕಿತ್ಸಕ ದೃಷ್ಟಿಯ ನೈತಿಕ ರಾಜಕಾರಣಿಗಳ ಅಗತ್ಯವಿದೆ' ಎಂದು ಪ್ರತಿಪಾದಿಸಿದರು.