ದೇವಿಯ ಉದ್ಭವ ಮೂರ್ತಿ ಇದ್ದು ಅದನ್ನೇ ಪ್ರತಿಷ್ಠಾಪಿಸಲಾಗಿದೆ, ಲಕ್ಷಾಂತರ ರೂಪಾಯಿ ಮೊತ್ತದಲ್ಲಿ ದೇಗುಲವನ್ನು ನವೀಕರಿಸಲಾಗಿದೆ. ಈ ವರ್ಷ ಗ್ರಾಮದಲ್ಲಿ ಉತ್ತಮ ಮಳೆಯಾದ ಕಾರಣ ಕೆರೆಕಟ್ಟೆಗಳು ತುಂಬಿವೆ. ಇದರಿಂದಾಗಿ ಉತ್ತಮ ಬೆಳೆಗಳು ಬಂದಿವೆ. ಆದ್ದರಿಂದ ಜಾತ್ರೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಎಚ್. ಭೀಮಪ್ಪ, ಜಿ.ತಿಮ್ಮಣ್ಣ, ಬಣಕಾರ ಬಸವರಾಜ, ಬುಡ್ಡಿ ಬಸವರಾಜ, ಎಸ್.ಹುಲುಗಪ್ಪ ತಿಳಿಸಿದರು. ದೇವಿ ಮೂರ್ತಿಯನ್ನು ₹1.25ಲಕ್ಷ ವೆಚ್ಚದಲ್ಲಿ ತಯಾರಿಸಲಾದ ಬೆಳ್ಳಿ ಕವಚಗಳಿಂದ ಅಲಂಕರಿಸಲಾಗಿದೆ.