ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನೀಕರಣ ಅಗತ್ಯ

Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ಪೊಲೀಸರ ಮೇಲೆ ಹಲ್ಲೆ ನಡೆದ ಕೆಲವು ಪ್ರಕರಣಗಳು ಈಚೆಗೆ ವರದಿಯಾಗಿವೆ. ಇದು ಹೊಸತಲ್ಲ. ರಾತ್ರಿ ಗಸ್ತು ಸಂದರ್ಭದಲ್ಲಿ, ಡಕಾಯಿತರನ್ನು ಹಿಡಿಯಲು ಮುಂದಾದ ಸಂದರ್ಭಗಳಲ್ಲಿ ಪೊಲೀಸರ ಮೇಲೆ ದಾಳಿಯಾದ ಅನೇಕ ಉದಾಹರಣೆಗಳಿವೆ. ಇಲಾಖೆ ಇನ್ನೂ ಆಧುನೀಕರಣಗೊಳ್ಳದಿರುವುದರಿಂದ ಪೊಲೀಸರು ಆಗಾಗ ಹಲ್ಲೆಗೆ ಒಳಗಾಗುವಂಥ ಸ್ಥಿತಿ ಒದಗಿದೆ.

ಸಮಾಜಘಾತಕ ಶಕ್ತಿಗಳು ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿರುತ್ತವೆ. ಆದರೆ ಪೊಲೀಸರು ಈಗಲೂ ಹಳೆಯ ಕಾಲದ, ಭಾರವಾದ ಬಂದೂಕುಗಳನ್ನೇ ಹೊತ್ತುಕೊಂಡು ಓಡಾಡಬೇಕಾಗಿದೆ.

ಪೊಲೀಸ್‌ ಇಲಾಖೆಯನ್ನೂ ಆಧುನೀಕರಣಗೊಳಿಸಿ, ಪೊಲೀಸರ ಕೈಗೆ ಒಳ್ಳೆಯ ಶಸ್ತ್ರಾಸ್ತ್ರಗಳನ್ನು ನೀಡಿದರೆ ಸಮಾಜಘಾತಕ ಶಕ್ತಿಗಳನ್ನು ಎದುರಿಸುವ ಧೈರ್ಯ ಅವರಿಗೆ ಬರುತ್ತದೆ. ಇದರಿಂದ ತಾವು ಹಲ್ಲೆಗೊಳಗಾಗುವುದು ತಪ್ಪುವುದರ ಜೊತೆಗೆ ಜನರಿಗೂ ರಕ್ಷಣೆ ಕೊಡಲು ಸಾಧ್ಯವಾಗುತ್ತದೆ.

– ಮುಸ್ಟೂರು ತಿಮ್ಮೇಶ, ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT