ಗಣರಾಜ್ಯೋತ್ಸವದ ಮುನ್ನಾ ದಿನವಾದ ಗುರುವಾರ ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ‘ಪ್ರಜೆಗಳು ದೇಶದ ಬುನಾದಿಯಾಗಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟಗಾರರನ್ನು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ನೆನೆಸಿಕೊಳ್ಳಬೇಕಾದ ದಿನ’ ಎಂದು ಹೇಳಿದರು. ಅಲ್ಲದೆ, ಯೋಧರು, ವೈದ್ಯರು, ರೈತರು, ಇಂಜಿನಿಯರ್ಗಳು ಮತ್ತು ದೇಶದ ಎಲ್ಲ ತಾಯಂದಿರಿಗೆ ಧನ್ಯವಾದ ಸಮರ್ಪಿಸಿದರು.