ಮಂಗಳೂರು: ‘ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಬಶೀರ್ ಅವರ ಕೊಲೆ ನಡೆದಿದೆ. ಇದರಿಂದ ನಮಗೆ ಚಿಂತೆ ಏನೂ ಇಲ್ಲ’ ಎಂದು ಮಂಗಳೂರಿನಲ್ಲಿ ವಿಎಚ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಶೇಣವ ಹೇಳಿದರು.
ನಗರದಲ್ಲಿ ಭಾನುವಾರ ಹಡೆದವ್ವನ ಶಾಪ ಕೃತಿ ಬಿಡುಗಡೆ ಸಮಾರಂಭದಲ್ಲಿ ಈ ಹೇಳಿಕೆ ನೀಡಿದರು.
ಕೋಮು ಗಲಭೆಗಳ ವೇಳೆ ಬಲಿಯಾದವರ ಪೋಷಕರು ಸರ್ಕಾರಕ್ಕೆ ಬರೆದ ಪತ್ರಗಳನ್ನು ಈ ಪುಸ್ತಕ ಒಳಗೊಂಡಿದೆ.