‘ಇತ್ತೀಚೆಗೆ ಕಂಬಳಿ ತಯಾರಿಸುವ ನೇಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಆ ವೇಳೆ ನಾನೂ ಅಲ್ಲಿಯೇ ಇದ್ದೆ. ಕಂಬಳಿ ನೇಕಾರರನ್ನು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದರು. ಅವರನ್ನು ಆರ್ಥಿಕವಾಗಿ ಸದೃಢ ಮಾಡಬಹುದು. ಕಂಬಳಿಯನ್ನು ಉಚಿತವಾಗಿ ಕೊಡಬೇಕೋ ಅಥವಾ ರಿಯಾಯಿತಿ ದರದಲ್ಲಿ ಕೊಡಬೇಕು ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕು’ ಎಂದು ಹೇಳಿದರು.