ಆರ್.ಡಿ.ರೊಪ್ಪ ಗ್ರಾಮದ ರೈತ ಪರಮೇಶ್ ಸಂತೆಯಲ್ಲಿ ಮಾರಾಟ ಮಾಡಲು ಸುಮಾರು 30 ಚೀಲ ಬದನೆಕಾಯಿ ಕಿತ್ತು ತಂದಿದ್ದಾರೆ. ಪ್ರತಿಯೊಂದು ಚೀಲದಲ್ಲಿ ಸುಮಾರು 15 ರಿಂದ 20 ಕೆಜಿ ತೂಕದಷ್ಟು ಬದನೆಕಾಯಿ ತುಂಬಿದ್ದು, ಅವುಗಳನ್ನು ಸ್ಥಳೀಯ ವ್ಯಾಪಾರಸ್ಥರು ಮತ್ತು ದಲ್ಲಾಳಿಗಳು ಮೂಟೆಯೊಂದಕ್ಕೆ ₹ 20 ನೀಡಿ ಖರೀದಿ ಮಾಡಲು ಮುಂದಾಗಿದ್ದಾರೆ.