‘ಭಾರತವನ್ನು ಹಿಂದೂಗಳ ದೇಶವೆಂದು ಬಿಂಬಿಸುವ ಪ್ರಯತ್ನವನ್ನು ಕೋಮುವಾದಿ ಶಕ್ತಿಗಳು ಮಾಡುತ್ತಿವೆ. ಅನೇಕ ವರ್ಷಗಳಿಂದ ಜಾತ್ಯತೀತ ತಳಹದಿಯ ಮೇಲೆ ಎಲ್ಲ ಧರ್ಮ, ಜಾತಿಯವರು ಸಾಮರಸ್ಯದಿಂದ ಬದುಕುತ್ತಿರುವ ವಾತಾವರಣವನ್ನು ಕೆಲವರು ಕಲುಷಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಹಿಮ್ಮೆಟ್ಟಿಸಬೇಕಾಗಿದೆ. ಜಾತ್ಯತೀತ ತತ್ವವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ಷಡ್ಯಂತ್ರವನ್ನು ಬುಡಮೇಲು ಮಾಡುವ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷದ ಮೇಲಿದೆ’ ಎಂದು ಅವರು ಹೇಳಿದರು.