ಬೆಂಗಳೂರು: ಹೈದರಾಬಾದ್ ಮಹಾನಗರ ಪಾಲಿಕೆಯ ಮೇಯರ್ ಬೊಂತು ರಾಮಮೋಹನ್ ಹಾಗೂ ಮೂವರು ಸದಸ್ಯೆಯರು ನಗರಕ್ಕೆ ಮಂಗಳವಾರ ಭೇಟಿ ನೀಡಿ ಪಾಲಿಕೆಯ ಕಾರ್ಯವೈಖರಿಯನ್ನು ಅವಲೋಕಿಸಿದರು.
ಯಡಿಯೂರು ವಾರ್ಡ್ಗೆ ಭೇಟಿ ನೀಡಿದ ಅವರು ಅಲ್ಲಿನ ಧನ್ವಂತರಿ ವನ, ಸಂಜೀವಿನಿ ವನ, ವಾಯುವಿಹಾರ ಮಾರ್ಗ, ಮಾದರಿ ಪಾದಚಾರಿ ಮಾರ್ಗ, ರಣಧೀರ ಕಂಠೀರವ ಉದ್ಯಾನ, ಜೈವಿಕ ಅನಿಲ ಘಟಕ ಹಾಗೂ ಮಳೆನೀರು ಇಂಗು ಗುಂಡಿಗಳನ್ನು ವೀಕ್ಷಿಸಿದರು.
ಬಳಿಕ, ವಸಂತನಗರದಲ್ಲಿರುವ ಇಂದಿರಾ ಕ್ಯಾಂಟೀನ್ನ ಕೇಂದ್ರೀಕೃತ ಅಡುಗೆ ಮನೆಗೆ ಭೇಟಿ ನೀಡಿದರು. ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಚರ್ಚ್ಸ್ಟ್ರೀಟ್ ರಸ್ತೆಯನ್ನು ವೀಕ್ಷಿಸಿದರು.