‘ಮೆಟ್ರೊ ರೈಲು ನಿಗಮ ನೇರ ನಮ್ಮ ಅಧೀನಕ್ಕೆ ಬರುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಶೇ 50 ರಷ್ಟು ಹಣ ಹೂಡಿಕೆ ಮಾಡಿವೆ. ಸ್ವಾಯತ್ತ ನಿಗಮವಾಗಿರುವುದರಿಂದ ದೈನಂದಿನ ವಿಚಾರಗಳಲ್ಲಿ ನಾವು ತಲೆ ಹಾಕಲು ಸಾಧ್ಯವಿಲ್ಲ. ಆದರೆ, ಕನ್ನಡಿಗರಿಗೆ ಆದ್ಯತೆ ನೀಡುವಂತೆ ಹೊಸ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸುತ್ತೇನೆ’ ಎಂದು ಜಾರ್ಜ್ ಭರವಸೆ ನೀಡಿದರು.