ದುಬೈ ಪ್ರವಾಸದಲ್ಲಿರುವ ಅವರು ಕೇಂದ್ರ ಸಂಪುಟದಲ್ಲಿರುವ ಇಬ್ಬರು ಟಿಡಿಪಿ ಸಚಿವರು ಮತ್ತು ಪಕ್ಷದ ಸಂಸದರ ಜತೆ ಟೆಲಿಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಈ ವೇಳೆ, ‘ಆಂಧ್ರ ಪ್ರದೇಶ ಭಾರತದಲ್ಲಿಲ್ಲ ಎಂಬಂತೆ ಕೇಂದ್ರ ಸರ್ಕಾರ ವರ್ತಿಸುತ್ತಿದೆ’ ಎಂದು ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ. ಅಲ್ಲದೆ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂದು ಆಗ್ರಹಿಸಿ ಸಂಸತ್ನಲ್ಲಿ ಪಕ್ಷದ ಸಂಸದರು ನಡೆಸುತ್ತಿರುವ ಪ್ರತಿಭಟನೆಯನ್ನು ಮುಂದುವರಿಸುವಂತೆ ನಾಯ್ಡು ಸೂಚಿಸಿದ್ದಾರೆ ಎನ್ನಲಾಗಿದೆ.