ಕೊಡಗಿನಿಂದ ಮೈಸೂರಿಗೆ ಬಂದ 20ಕ್ಕೂ ಹೆಚ್ಚು ಸಂಘಟನೆಗಳ ಸಾವಿರಾರು ಪ್ರತಿಭಟನಾಕಾರರು ಇಲ್ಲಿನ ವಸ್ತುಪ್ರದರ್ಶನ ಮೈದಾನದಲ್ಲಿ ಜಮಾಯಿಸಿದರು. ಕಪ್ಪುಪಟ್ಟಿ ಕಟ್ಟಿ
ಕೊಂಡು ಮೆರವಣಿಗೆ ನಡೆಸಿದರು. ‘ಕೊಡಗು ಉಳಿಸಿ, ಕಾವೇರಿ ಕಾಪಾಡಿ’ ಎಂಬ ಘೋಷಣೆಯನ್ನು ಮೊಳಗಿಸಿದರು. ವೃದ್ಧರು, ಮಕ್ಕಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಹೋರಾಟ ಬೆಂಬಲಿಸಿದರು.