ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ ಬಿಜೆಪಿ 'ಕಾಂಗ್ರೆಸ್ ಗೂಂಡಾಗಳಿಂದ ಕರ್ನಾಟಕ ರಕ್ಷಿಸಿ' ಅಭಿಯಾನ ಪ್ರಾರಂಭಿಸಿದೆ.
ಶಾಸಕ ಹ್ಯಾರಿಸ್ರನ್ನು ತಕ್ಷಣವೇ ಸ್ಥಾನದಿಂದ ಅಮಾನತು ಮಾಡಬೇಕು, ಶಾಂತಿನಗರದ ಪಬ್, ಬಾರ್ಗಳಿಂದ ಹಫ್ತಾ ವಸೂಲು ಮಾಡಿಕೊಡುತ್ತಾರೆ ಎಂಬ ಕಾರಣಕ್ಕೆ ಅವರನ್ನು ರಕ್ಷಿಸುತ್ತಿದ್ದೀರಾ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಉತ್ತರಿಸುವಂತೆ ಬಿಜೆಪಿ ಐದು ಪ್ರಶ್ನೆಗಳನ್ನು ಟ್ವೀಟಿಸಿದೆ.
ಸಿಎಂ ಸಿದ್ದರಾಮಯ್ಯನವರಿಗೆ ಕನ್ನಡಿಗರು ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ತನಿಖೆಯ ದಾರಿ ತಪ್ಪಿಸುತ್ತಿರುವ ಶಾಸಕ ಹ್ಯಾರಿಸ್ರನ್ನು ರಕ್ಷಿಸುತ್ತಿರುವುದೇಕೆ? ಅವರನ್ನು ಶಾಸಕ ಸ್ಥಾನದಿಂದ ತತ್ಕ್ಷಣವೇ ಅಮಾನತು ಮಾಡದಿದ್ದರೆ, ಈ ಪ್ರಕರಣದಲ್ಲಿ ನ್ಯಾಯ ದೊರಕಲು ಹೇಗೆ ಸಾಧ್ಯ? ಉತ್ತರಿಸಿ ಮುಖ್ಯಮಂತ್ರಿ @siddaramaiah!#SackHarrispic.twitter.com/6nz8iQdXEF