ಜ.19ರಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹಾಗೂ ಅರವಿಂದಕುಮಾರ್ ಅವರ ದ್ವಿಸದಸ್ಯ ಪೀಠ ಯುಜಿಸಿ ಕಾರ್ಯದರ್ಶಿ ಪ್ರಕಾಶಕುಮಾರ್ ಠಾಕೂರ್ ಅವರಿಗೆ ನೋಟಿಸ್ ನೀಡಿತ್ತು. ಆದರೆ, ಯುಜಿಸಿಯ ಹೊಸ ಕಾರ್ಯದರ್ಶಿಯಾಗಿ ಪ್ರೊ.ರಜನೀಶ್ ಜೈನ್ ಅವರು ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಉತ್ತರ ನೀಡಲು ಯುಜಿಸಿ ಮತ್ತೊಂದು ವಾರದ ಸಮಯ ಕೋರಿದೆ.