‘ರೈತರ ಮಕ್ಕಳು ಸಾಯಬಾರದು’ ಎಂಬುದು ಈ ಚಿತ್ರದ ಒನ್ಲೈನ್ ಸ್ಟೋರಿ. ಈ ಮೂಲಕ ಕೃಷಿಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳಲು ಅವರು ಯತ್ನಿಸಿದ್ದಾರೆ. ಲಂಚಾವತಾರದ ವಿರುದ್ಧ ಹೋರಾಡಿ ನ್ಯಾಯಕ್ಕೆ ಗೆಲುವು ತಂದುಕೊಡುವ ಪಾತ್ರದಲ್ಲಿ ಸಂತೋಷ್ ನಟಿಸಿದ್ದಾರೆ. ಮರಗಳನ್ನು ಬೆಳೆಸಿ ಎಂಬ ಸಂದೇಶ ಸಾರುವ ನಾಯಕಿಯಾಗಿ ಆಶಾ ನಟಿಸಿದ್ದಾರೆ. ತಂದೆಯ ಕನಸಿಗೆ ಮಗ ಸೂರ್ಯರಾಜ್ ಸಂಗೀತದ ಬೆಂಬಲ ಕೊಟ್ಟಿದ್ದಾರೆ. ಜತೆಗೆ ಸಂಕಲನ, ಛಾಯಾಗ್ರಹಣದ ಜವಾಬ್ದಾರಿಯನ್ನೂ ಅವರೇ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ದೊರೆತಿದೆ.