ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ತಮಾಷೆ ನಿಲ್ಲಲಿ

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಉತ್ತರ ಭಾರತದ ರಾಜಕೀಯ ಧುರೀಣರ ಬಾಯಿಯಿಂದ ಒಂದೆರಡು ಕನ್ನಡ ಮಾತುಗಳನ್ನು ಆಡಿಸಿ, ಸೇರಿದ ಜನರಿಂದ ಚಪ್ಪಾಳೆ ಗಿಟ್ಟಿಸಿ ಕನ್ನಡಿಗರ ಮನಗೆಲ್ಲುವ ಪ್ರಯತ್ನವನ್ನು ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ.‌

ವರ್ಷಪೂರ್ತಿ ಕನ್ನಡವನ್ನು ಕಡೆಗಣಿಸುವ ಮತ್ತು ಹಂತ ಹಂತವಾಗಿ ಹಿಂದಿಯನ್ನು ಕನ್ನಡಿಗರ ಮೇಲೆ ಹೇರುವ ಕೆಲಸವನ್ನು ಹಿಂದಿನ ಬಾಗಿಲಿನಿಂದ ಮಾಡುವ ಈ ಪಕ್ಷಗಳ ನಾಯಕರು, ಕನ್ನಡಿಗರ ಕಣ್ಣಿಗೆ ಮಣ್ಣೆರಚುವ ಈ ಕೆಲಸವನ್ನು ಬಿಡಲಿ. ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕುಗಳು ಮತ್ತು ಹೆದ್ದಾರಿ ಪಕ್ಕದ ಸೂಚನಾ ಫಲಕಗಳಲ್ಲಿ ಕನ್ನಡವನ್ನೇ ಬಳಸಲು ಒತ್ತಾಯಿಸಲಿ. ಈ ಪಕ್ಷಗಳ ಸ್ಥಳೀಯ ನಾಯಕರು ಈ ನಿಟ್ಟಿನಲ್ಲಿ ಬದ್ಧತೆಯನ್ನು ತೋರಿಸಲಿ.

ಕಾಟಾಚಾರಕ್ಕಾಗಿ ಕನ್ನಡ ಮಾತನಾಡಿಸುವ ಈ ತಮಾಷೆಯನ್ನು ಸಾಕು ಮಾಡಿ. ಕನ್ನಡಿಗರ ಪ್ರಬುದ್ಧತೆಯನ್ನು ಅಪಹಾಸ್ಯ ಮಾಡಬೇಡಿ.
–ರಮಾನಂದ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT