ವರ್ಷಪೂರ್ತಿ ಕನ್ನಡವನ್ನು ಕಡೆಗಣಿಸುವ ಮತ್ತು ಹಂತ ಹಂತವಾಗಿ ಹಿಂದಿಯನ್ನು ಕನ್ನಡಿಗರ ಮೇಲೆ ಹೇರುವ ಕೆಲಸವನ್ನು ಹಿಂದಿನ ಬಾಗಿಲಿನಿಂದ ಮಾಡುವ ಈ ಪಕ್ಷಗಳ ನಾಯಕರು, ಕನ್ನಡಿಗರ ಕಣ್ಣಿಗೆ ಮಣ್ಣೆರಚುವ ಈ ಕೆಲಸವನ್ನು ಬಿಡಲಿ. ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕುಗಳು ಮತ್ತು ಹೆದ್ದಾರಿ ಪಕ್ಕದ ಸೂಚನಾ ಫಲಕಗಳಲ್ಲಿ ಕನ್ನಡವನ್ನೇ ಬಳಸಲು ಒತ್ತಾಯಿಸಲಿ. ಈ ಪಕ್ಷಗಳ ಸ್ಥಳೀಯ ನಾಯಕರು ಈ ನಿಟ್ಟಿನಲ್ಲಿ ಬದ್ಧತೆಯನ್ನು ತೋರಿಸಲಿ.