ಚುನಾವಣಾ ಕಾರ್ಯತಂತ್ರ ಹೆಣೆಯಲು, ನಾಯಕರ ಜತೆ ಸಮಾಲೋಚನೆ ನಡೆಸುವ ಸಲುವಾಗಿ ಎರಡು ತಿಂಗಳು ಇಲ್ಲೇ ಇರಬೇಕಾಗುತ್ತದೆ. ಯಾವುದಾದರೂ ತಾರಾ ಹೋಟೆಲ್ನಲ್ಲಿ ಉಳಿದುಕೊಂಡರೆ ಖಾಸಗಿ ಸಭೆಗಳಿಗೆ ಅಡಚಣೆಯಾಗುತ್ತದೆ. ಜತೆಗೆ ಭದ್ರತೆಯ ದೃಷ್ಟಿಯಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಕಾರಣಕ್ಕೆ ಪ್ರತ್ಯೇಕ ಬಂಗಲೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.