ಬೆಂಗಳೂರು: ಲಗ್ಗೆರೆ ಸೇತುವೆ ಹಾಗೂ ಕೆಂಪೇಗೌಡ ಬಡಾವಣೆಯ ಎರಡು ಪ್ರದೇಶಗಳಲ್ಲಿ 900 ಎಂ.ಎಂ ವ್ಯಾಸದ ನೀರಿನ ಕೊಳವೆ ಮಾರ್ಗ ಜೋಡಣಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಆದ್ದರಿಂದ ಶುಕ್ರವಾರ (ಮಾ.2) ಬೆಳಿಗ್ಗೆ 7ರಿಂದ ರಾತ್ರಿ 11ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಸ್ಥಳಗಳು: ರಾಜಾಜಿನಗರದ ಎಲ್ಲಾ ಪ್ರದೇಶ ಮತ್ತು ಮಹಾಲಕ್ಷ್ಮಿ ಬಡಾವಣೆ, ನಂದಿನಿ ಬಡಾವಣೆ, ಪಶ್ಚಿಮ ಕಾರ್ಡ್ ರಸ್ತೆ, ಪ್ರಕಾಶ್ ನಗರ, ಕಾಮಾಕ್ಷಿಪಾಳ್ಯ, ನಾಗರಬಾವಿ.