ಮುಖ್ಯಮಂತ್ರಿ ಹೆಲಿಕಾಪ್ಟರ್ ಮೂಲಕ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಬಂದಿಳಿದರು. ಅಲ್ಲಿಂದ ವಾಹನದಲ್ಲಿ ತಾಲ್ಲೂಕು ಕಚೇರಿ, ನಗರಸಭೆ, ಅಂಬೇಡ್ಕರ್ ಭವನಕ್ಕೆ ತೆರಳಿದರು. ನಂತರ ಶಿವನಹಳ್ಳಿ ಬಳಿ ₹ 500 ಕೋಟಿ ವೆಚ್ಚದಲ್ಲಿ ನಿರ್ಮಾಣದ ನಂದಿನಿ ಹಾಲಿನ ಉತ್ಪನ್ನಗಳ ಸಂಕೀರ್ಣದ ಮೆಗಾ ಡೇರಿ ಉದ್ಘಾಟನೆಗೆ ತೆರಳಿದರು.