ಸರೋಜ ಪೋಳ ಮಾತನಾಡಿ, ‘ರಾಜಕೀಯ ಕ್ಷೇತ್ರದಕ್ಕೆ ತಾವು ಹೊಸಬರು. ಆದರೆ, ಮೀಸಲಾತಿ ನಿಯಮಗಳಡಿ ಅಸ್ಪೃಶ್ಯರಿಗೆ ನ್ಯಾಯ ಒದಗಿಸುವ ಜೊತೆಗೆ ಹೈದರಬಾದ ಕರ್ನಾಟಕದಲ್ಲಿ ಮಹಿಳೆಯರಿಗೆ ಟಿಕೆಟ್ ಹಂಚಿಕೆ ಆಗುವಲ್ಲಿ ತಾರತಮ್ಯವಾಗಿದೆ. ಅಂತೆಯೇ ಹೈಕಮಾಂಡ್ ಈಗಿರುವ ತಮ್ಮ ಮೂವರಲ್ಲಿ ಯಾರಿಗೆ ಟಿಕೆಟ್ ನೀಡಿದರು ಒಗ್ಗಟ್ಟಾಗಿ ಶ್ರಮಿಸುತ್ತಿದ್ದು ತಮ್ಮ ಸಹಕಾರ ಬೇಕು’ ಎಂದು ಮನವಿ ಮಾಡಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಶರಣಪ್ಪ ಮೇಟಿ, ಪುರಸಭೆ ಸದಸ್ಯರಾದ ಕುಮಾರಸ್ವಾಮಿ ಸಾಲ್ಮನಿ, ಅನೀಸಪಾಷ, ಗುಂಡೆರಾವ್ ಕುಲಕರ್ಣಿ, ರವಿಕುಮಾರ ಚೌದ್ರಿ, ಶಿವರಾಯ ದೇಗುಲಮಡಿ ಇದ್ದರು.