ರೈತ ರಾಮಣ್ಣ ಕಳೆದ ಆರು ತಿಂಗಳ ಹಿಂದೆಯೇ ಕಾಲುವೆ ಬಿರುಕು ಬಿಟ್ಟಿರುವ ಬಗ್ಗೆ ಇಲಾಖೆ ಗಮನಕ್ಕೆ ತಂದಿದ್ದಾರೆ ಮಂಗಳವಾರ ಬೆಳಿಗ್ಗೆ ಅದೇ ಸ್ಥಳದಲ್ಲಿಯೇ ನೀರಿನ ಒತ್ತಡ ಹೆಚ್ಚಾದ್ದರಿಂದ ಒಡೆದಿದ್ದು, 4.28 ಗುಂಟೆ ಜಮೀನಿನಲ್ಲಿ ಇದ್ದ ಹತ್ತಿ ಬೆಳೆಗೆ ನೀರು ನುಗ್ಗಿ ಸಂಪೂರ್ಣವಾಗಿ ಹಾಳಾಗಿದೆ. ಇದರ ಪಕ್ಕದಲ್ಲಿ ಇದ್ದ ವೀರನಗೌಡ ಲಿಂಗನಗೌಡ ಹೂವಿನಹೆಡ್ಗಿ ಅಂಚೆಸೂಗೂರು ಅವರ ಜಮೀನಿಗೆ ನೀರು ನುಗ್ಗಿ 12 ಎಕರೆಯಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ಜಲಾವೃತಗೊಂಡಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ ಎಂದು ಇಬ್ಬರೂ ರೈತರು ಆರೋಪಿಸಿದ್ದಾರೆ.