ಕಲಾಪ ಆರಂಭವಾದಾಗಲೇ ಬ್ಯಾಂಕ್ ಹಗರಣ ಮತ್ತು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯವನ್ನು ಉಲ್ಲೇಖಿಸಿ ಸದನದಲ್ಲಿ ಗದ್ದಲವುಂಟಾಗಿದೆ. ಟಿಡಿಪಿ, ವೈಎಸ್ಆರ್, ಕಾಂಗ್ರೆಸ್, ಟಿಆರ್ಎಸ್, ಎಐಎಡಿಎಂಕೆ, ಆರ್ಜೆಡಿ ಸದಸ್ಯರು ಸದನದ ಅಂಗಳಕ್ಕಿಳಿದು ಗದ್ದಲವುಂಟು ಮಾಡಿದ್ದಾರೆ. ಎಸ್.ಪಿ ಮತ್ತು ಎಡಪಕ್ಷಗಳೂ ಇದರಲ್ಲಿ ಭಾಗಿಯಾಗಿದ್ದವು.