‘ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದಿಂದಾಗಿ ಕಾಯಂ ಕುಲಪತಿ ನೇಮಕ ಪ್ರಕ್ರಿಯೆ ನನೆಗುದ್ದಿಗೆ ಬಿದ್ದಿದೆ. ಹಂಗಾಮಿ ಕುಲಪತಿಗಳಿರುವ ವಿಶ್ವವಿದ್ಯಾಲಯಗಳಲ್ಲಿ ಆದಷ್ಟು ಬೇಗ ಕುಲಪತಿಗಳ ನೇಮಕ ಮಾಡುತ್ತೇನೆ ಎಂದು ಸಚಿವರು ಹತ್ತು ತಿಂಗಳಿನಿಂದ ಹೇಳುತ್ತಲೇ ಇದ್ದಾರೆ. ನೇಮಕಾತಿ ಮಾತ್ರ ಆಗಿಲ್ಲ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಬೇಸರ ವ್ಯಕ್ತಪಡಿಸಿದರು.