ವಿಚಾರಗೋಷ್ಠಿ ಉದ್ಘಾಟಿಸಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ‘ಇಂದು ಕನ್ನಡ ಸಾಹಿತ್ಯ ತಟಸ್ಥವಾಗಿದೆ. ಜನರಿಗೆ ಸ್ಫೂರ್ತಿ ನೀಡಲು ವಿಫಲವಾಗಿದೆ. ಇತ್ತೀಚಿನ ಕೆಲವು ಸಾಹಿತಿಗಳು ಸಾಹಿತ್ಯ ಕೃಷಿ ಬದಲು, ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೆಲ ಸಾಹಿತಿಗಳ ಮಾತುಗಳೂ ಅಸಹ್ಯ ಹುಟ್ಟಿಸುವಂತಿರುತ್ತವೆ’ ಎಂದು ಟೀಕಿಸಿದರು.