ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಲೆ ಎಬ್ಬಿಸಲು ರಾಷ್ಟ್ರದ್ರೋಹಿಗಳೆಲ್ಲ ಕೈಜೋಡಿಸುತ್ತಿದ್ದಾರೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.
ಸರಣಿ ಟ್ವೀಟ್ಗಳ ಮೂಲಕ ಪ್ರತಿಪಕ್ಷಗಳು, ಪ್ರಗತಿಪರರು ಮತ್ತು ಬುದ್ಧಿಜೀವಿಗಳ ವಿರುದ್ಧ ಅವರು ಹರಿಹಾಯ್ದಿದ್ದಾರೆ.
‘ಇಡೀ ವಿಶ್ವ ಈಗ ಮೋದಿಯವರ ನಾಯಕತ್ವವನ್ನು ಮತ್ತು ಭಾರತದ ಮಹತ್ವವನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದೆ. ಆದರೆ ಭಾರತದಲ್ಲಿ ಏನಾಗುತ್ತಿದೆ? ಇಡೀ ದೇಶದಲ್ಲಿ ಮೋದಿ ವಿರೋಧಿ ಅಲೆ ಎಬ್ಬಿಸಲು ರಾಷ್ಟ್ರದ್ರೋಹಿಗಳೆಲ್ಲ ಕೈಜೋಡಿಸುತ್ತಿದ್ದಾರೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇಡೀ ವಿಶ್ವ ಈಗ ಮೋದಿಯವರ ನಾಯಕತ್ವವನ್ನು ಭಾರತದ ಮಹತ್ವವನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದೆ. ಆದರೆ ಭಾರತದಲ್ಲಿ ಏನಾಗುತ್ತಿದೆ? ಇಡೀ ದೇಶದಲ್ಲಿ ಮೋದಿ ವಿರೋಧಿ ಅಲೆ ಎಬ್ಬಿಸಲು ರಾಷ್ಟ್ರದ್ರೋಹಿಗಳೆಲ್ಲ ಕೈಜೋಡಿಸುತ್ತಿದ್ದಾರೆ.