<p><strong>ಬೆಂಗಳೂರು:</strong> ‘ಪರಿಷತ್ತಿನ ಸದಸ್ಯರು ನಿಮ್ಮನ್ನು ಆಯ್ಕೆ ಮಾಡಿರುವುದು ಮೂರು ವರ್ಷದ ಅವಧಿಗೆ ಮಾತ್ರ. ಈ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ಹೊರಗಡೆ ಬನ್ನಿ. ಈ ಬಗ್ಗೆ ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ, ಸಾಹಿತ್ಯ ವಲಯ ಮೌನವಾಗಿರುವುದು ಆಶ್ಚರ್ಯ ಉಂಟುಮಾಡಿದೆ’ ಎಂದು ಲೇಖಕಿ ಡಾ. ವಿಜಯಾ ಹೇಳಿದರು.</p>.<p>ಬಹುಜನ ಕನ್ನಡಿಗರ ಪತ್ರಿಕಾ ಬಳಗ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.</p>.<p>ಹೀಗೆ ಸುಮ್ಮನಿರುವುದಕ್ಕೆ ಪರಿಷತ್ತು ನೀಡುವ ನೃಪತುಂಗ ಪ್ರಶಸ್ತಿ ಕಾರಣವೋ ಅಥವಾ ಅಸಾಹಿತ್ಯ ವಾತಾವರಣದಿಂದ ಬೇಸತ್ತು ಸುಮ್ಮನಿದ್ದಾರೋ ತಿಳಿಯದು.<br /> ಮಹನಿಯರು ಕಟ್ಟಿ ಬೆಳೆಸಿದ ಪರಿಷತ್ತಿನ ಇಂದಿನ ಸ್ಥಿತಿ ಬೇಸರ ತಂದಿದೆ. ಇಲ್ಲಿ ಮತ್ತೆ ಸಾಹಿತ್ಯದ ವಾತಾವರಣ ನಿರ್ಮಿಸುವ ಕೆಲಸ ಆಗಬೇಕು ಎಂದು ಹೇಳಿದರು.ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ, ‘ಕಸಾಪ ಅಧಿಕಾರವಧಿ ವಿಸ್ತರಣೆ ವಿಚಾರದಲ್ಲಿ ಬಂಡಾಯ ಸಾಹಿತಿಗಳು ಸೇರಿದಂತೆ ದೊಡ್ಡ ಸಾಹಿತಿಗಳು ಬಾಯಿಮುಚ್ಚಿ ಕುಳಿತಿದ್ದಾರೆ. ಕಸಾಪದಲ್ಲಿ ಇಂದು ಬೌದ್ಧಿಕ ದಾರಿದ್ರ್ಯ ತುಂಬಿದೆ. ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿದರೆ ಪ್ರಶಸ್ತಿಯ ಆಸೆ ತೋರಿಸಿ ಬಾಯಿ ಮುಚ್ಚಿಸುತ್ತಿದ್ದಾರೆ’ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪರಿಷತ್ತಿನ ಸದಸ್ಯರು ನಿಮ್ಮನ್ನು ಆಯ್ಕೆ ಮಾಡಿರುವುದು ಮೂರು ವರ್ಷದ ಅವಧಿಗೆ ಮಾತ್ರ. ಈ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ಹೊರಗಡೆ ಬನ್ನಿ. ಈ ಬಗ್ಗೆ ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ, ಸಾಹಿತ್ಯ ವಲಯ ಮೌನವಾಗಿರುವುದು ಆಶ್ಚರ್ಯ ಉಂಟುಮಾಡಿದೆ’ ಎಂದು ಲೇಖಕಿ ಡಾ. ವಿಜಯಾ ಹೇಳಿದರು.</p>.<p>ಬಹುಜನ ಕನ್ನಡಿಗರ ಪತ್ರಿಕಾ ಬಳಗ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.</p>.<p>ಹೀಗೆ ಸುಮ್ಮನಿರುವುದಕ್ಕೆ ಪರಿಷತ್ತು ನೀಡುವ ನೃಪತುಂಗ ಪ್ರಶಸ್ತಿ ಕಾರಣವೋ ಅಥವಾ ಅಸಾಹಿತ್ಯ ವಾತಾವರಣದಿಂದ ಬೇಸತ್ತು ಸುಮ್ಮನಿದ್ದಾರೋ ತಿಳಿಯದು.<br /> ಮಹನಿಯರು ಕಟ್ಟಿ ಬೆಳೆಸಿದ ಪರಿಷತ್ತಿನ ಇಂದಿನ ಸ್ಥಿತಿ ಬೇಸರ ತಂದಿದೆ. ಇಲ್ಲಿ ಮತ್ತೆ ಸಾಹಿತ್ಯದ ವಾತಾವರಣ ನಿರ್ಮಿಸುವ ಕೆಲಸ ಆಗಬೇಕು ಎಂದು ಹೇಳಿದರು.ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ, ‘ಕಸಾಪ ಅಧಿಕಾರವಧಿ ವಿಸ್ತರಣೆ ವಿಚಾರದಲ್ಲಿ ಬಂಡಾಯ ಸಾಹಿತಿಗಳು ಸೇರಿದಂತೆ ದೊಡ್ಡ ಸಾಹಿತಿಗಳು ಬಾಯಿಮುಚ್ಚಿ ಕುಳಿತಿದ್ದಾರೆ. ಕಸಾಪದಲ್ಲಿ ಇಂದು ಬೌದ್ಧಿಕ ದಾರಿದ್ರ್ಯ ತುಂಬಿದೆ. ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿದರೆ ಪ್ರಶಸ್ತಿಯ ಆಸೆ ತೋರಿಸಿ ಬಾಯಿ ಮುಚ್ಚಿಸುತ್ತಿದ್ದಾರೆ’ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>