‘ಶಿಕ್ಷಣ, ಆರೋಗ್ಯ ಸೇರಿದಂತೆ ದೇವರನ್ನೂ ವ್ಯಾಪಾರೀಕರಣಗೊಳಿಸಲಾಗಿದೆ. ಇದಕ್ಕೆ ರಾಜಕಾರಣವೂ ಹೊರತಾಗಿಲ್ಲ. ಇದು ಪ್ರಜಾಪ್ರಭುತ್ವವೋ, ರಾಜಕಾರಣವೋ ಅಥವಾ ಭೂಗತ ಜಗತ್ತಿನ ವಿದ್ಯಮಾನವೋ ತಿಳಿಯದಾಗಿದೆ’ ಎಂದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್– ಈ ಮೂರೂ ಪಕ್ಷಗಳು ಜಾತಿ, ಧರ್ಮದ ಲೆಕ್ಕಾಚಾರದಲ್ಲಿ ಮತ ಪಡೆಯಲು ಮುಂದಾಗಿದ್ದು, ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧ ಛಿದ್ರಗೊಳಿಸುತ್ತಿವೆ. ದೇಶ ಇಂಥ ಅಧಃಪತನದ ಸ್ಥಿತಿ ತಲುಪಿರುವುದು ದುರಂತದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.