‘ಹೆದ್ದಾರಿಗಳಲ್ಲಿ ಆನೆಗಳು ಸಾಯುತ್ತಿವೆ, ರೈಲುಗಳಿಗೆ ಸಿಲುಕಿ ಆನೆಗಳು ಬಲಿಯಾಗುತ್ತಿವೆ. ನೋಡಿ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದರೆ ಏನೂ ಬದಲಾವಣೆ ಆಗದು. ಇವೇ ಜಾಗಗಳಲ್ಲಿ ಓಡಾಡಬೇಕು ಎಂದು ಆನೆಗಳಿಗೆ ಸೂಚಿಸುವುದು ಸಾಧ್ಯವಿಲ್ಲ. ಆನೆಗಳಿಗೆ ಸುರಕ್ಷಿತವಾದ ಕಾರಿಡಾರ್ ಬೇಕು. ಈ ಬಗ್ಗೆ ಯೋಚನೆ ಮಾಡಿ. ಇನ್ನು ಹತ್ತು ದಿನಗಳಲ್ಲಿ ವರದಿ ನೀಡಿ’ ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಎನ್.ಎಸ್.ನಾಡಕರ್ಣಿ ಅವರಿಗೆ ಪೀಠ ಸೂಚಿಸಿತು.