<p><strong>ನವದೆಹಲಿ </strong>: ‘ಕಾಡುಗಳ್ಳ ವೀರಪ್ಪನ್ ಸತ್ತ ನಂತರ ಆನೆಗಳ ಸಂಖ್ಯೆ ಹೆಚ್ಚಿದೆ. ಆದರೆ ಬೇರೆ–ಬೇರೆ ಕಾರಣಗಳಿಗೆ ಆನೆಗಳು ಸಾಯುತ್ತಲೇ ಇವೆ. ಆನೆ ಕಾರಿಡಾರ್ ರೂಪಿಸಿದರೆ ಅವುಗಳ ಸಾವನ್ನು ತಡೆಯಬಹುದೇ’ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿತು.</p>.<p>ಆನೆ ಕಾರಿಡಾರ್ಗಳಿಗಾಗಿ ಒತ್ತಾಯಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಮದನ್.ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರಿದ್ದ ಪೀಠವು ವಿಚಾರಣೆ ನಡೆಸಿತು.</p>.<p>‘ಹೆದ್ದಾರಿಗಳಲ್ಲಿ ಆನೆಗಳು ಸಾಯುತ್ತಿವೆ, ರೈಲುಗಳಿಗೆ ಸಿಲುಕಿ ಆನೆಗಳು ಬಲಿಯಾಗುತ್ತಿವೆ. ನೋಡಿ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದರೆ ಏನೂ ಬದಲಾವಣೆ ಆಗದು. ಇವೇ ಜಾಗಗಳಲ್ಲಿ ಓಡಾಡಬೇಕು ಎಂದು ಆನೆಗಳಿಗೆ ಸೂಚಿಸುವುದು ಸಾಧ್ಯವಿಲ್ಲ. ಆನೆಗಳಿಗೆ ಸುರಕ್ಷಿತವಾದ ಕಾರಿಡಾರ್ ಬೇಕು. ಈ ಬಗ್ಗೆ ಯೋಚನೆ ಮಾಡಿ. ಇನ್ನು ಹತ್ತು ದಿನಗಳಲ್ಲಿ ವರದಿ ನೀಡಿ’ ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಎನ್.ಎಸ್.ನಾಡಕರ್ಣಿ ಅವರಿಗೆ ಪೀಠ ಸೂಚಿಸಿತು.</p>.<p>‘ಆನೆಗಳಿಗೆ ಮೀಸಲಿರಿಸಿರುವ ಪ್ರದೇಶ ಅವುಗಳಿಗೆ ಸಾಲುತ್ತಿಲ್ಲ. ಆನೆ ಕಾರಿಡಾರ್ಗಳನ್ನು ಹಾದು ಹೋಗುವ ಹೆದ್ದಾರಿ ಮತ್ತು ರೈಲು ಮಾರ್ಗಗಳಲ್ಲಿ ಅಪಘಾತಗಳು ಸಂಭವಿಸಿ ಆನೆಗಳು ಸಾಯುತ್ತಿವೆ. ಹೀಗಾಗಿ ಸುರಕ್ಷಿತವಾದ ಆನೆ ಕಾರಿಡಾರ್ಗಳನ್ನು ರೂಪಿಸಬೇಕು’ ಎಂದು ಅರ್ಜಿದಾರರ ಪರ ವಕೀಲರು ಪೀಠದ ಎದುರು ಪ್ರತಿಪಾದಿಸಿದರು.</p>.<p>ಈ ವಿಚಾರದಲ್ಲಿ ಪೀಠಕ್ಕೆ ನೆರವಾಗಲು ನೇಮಿಸಿರುವ ನ್ಯಾಯಾಲಯ ಸಹಾಯಕರು (ಅಮಿಕಸ್ ಕ್ಯೂರಿ) ಕೂಡ, ‘ಆನೆ ಕಾರಿಡಾರ್ಗಳನ್ನು ರೂಪಿಸಿದರೆ ಆನೆಗಳ ಸಾವನ್ನು ಸ್ವಲ್ಪಮಟ್ಟಿಗೆ ತಡೆಯಬಹುದು’ ಎಂದು ತಿಳಿಸಿದರು.</p>.<p>‘ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಇದೇ ವಿಚಾರಕ್ಕೆ ಸಂಬಂಧಿಸಿದ ಕೆಲವು ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ದೇಶದಲ್ಲಿ 27 ಆನೆ ಕಾರಿಡಾರ್ಗಳನ್ನು ರೂಪಿಸಬೇಕು ಎಂಬ ಶಿಫಾರಸುಗಳನ್ನು ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು ಪರಿಗಣಿಸುವ ಸಾಧ್ಯತೆ ಇದೆ ಎಂದು ಈಗಾಗಲೇ ಆ ಪೀಠಕ್ಕೆ ಮಾಹಿತಿ ನೀಡಿದ್ದೇವೆ’ ಎಂದು ನಾಡಕರ್ಣಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ </strong>: ‘ಕಾಡುಗಳ್ಳ ವೀರಪ್ಪನ್ ಸತ್ತ ನಂತರ ಆನೆಗಳ ಸಂಖ್ಯೆ ಹೆಚ್ಚಿದೆ. ಆದರೆ ಬೇರೆ–ಬೇರೆ ಕಾರಣಗಳಿಗೆ ಆನೆಗಳು ಸಾಯುತ್ತಲೇ ಇವೆ. ಆನೆ ಕಾರಿಡಾರ್ ರೂಪಿಸಿದರೆ ಅವುಗಳ ಸಾವನ್ನು ತಡೆಯಬಹುದೇ’ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿತು.</p>.<p>ಆನೆ ಕಾರಿಡಾರ್ಗಳಿಗಾಗಿ ಒತ್ತಾಯಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಮದನ್.ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರಿದ್ದ ಪೀಠವು ವಿಚಾರಣೆ ನಡೆಸಿತು.</p>.<p>‘ಹೆದ್ದಾರಿಗಳಲ್ಲಿ ಆನೆಗಳು ಸಾಯುತ್ತಿವೆ, ರೈಲುಗಳಿಗೆ ಸಿಲುಕಿ ಆನೆಗಳು ಬಲಿಯಾಗುತ್ತಿವೆ. ನೋಡಿ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದರೆ ಏನೂ ಬದಲಾವಣೆ ಆಗದು. ಇವೇ ಜಾಗಗಳಲ್ಲಿ ಓಡಾಡಬೇಕು ಎಂದು ಆನೆಗಳಿಗೆ ಸೂಚಿಸುವುದು ಸಾಧ್ಯವಿಲ್ಲ. ಆನೆಗಳಿಗೆ ಸುರಕ್ಷಿತವಾದ ಕಾರಿಡಾರ್ ಬೇಕು. ಈ ಬಗ್ಗೆ ಯೋಚನೆ ಮಾಡಿ. ಇನ್ನು ಹತ್ತು ದಿನಗಳಲ್ಲಿ ವರದಿ ನೀಡಿ’ ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಎನ್.ಎಸ್.ನಾಡಕರ್ಣಿ ಅವರಿಗೆ ಪೀಠ ಸೂಚಿಸಿತು.</p>.<p>‘ಆನೆಗಳಿಗೆ ಮೀಸಲಿರಿಸಿರುವ ಪ್ರದೇಶ ಅವುಗಳಿಗೆ ಸಾಲುತ್ತಿಲ್ಲ. ಆನೆ ಕಾರಿಡಾರ್ಗಳನ್ನು ಹಾದು ಹೋಗುವ ಹೆದ್ದಾರಿ ಮತ್ತು ರೈಲು ಮಾರ್ಗಗಳಲ್ಲಿ ಅಪಘಾತಗಳು ಸಂಭವಿಸಿ ಆನೆಗಳು ಸಾಯುತ್ತಿವೆ. ಹೀಗಾಗಿ ಸುರಕ್ಷಿತವಾದ ಆನೆ ಕಾರಿಡಾರ್ಗಳನ್ನು ರೂಪಿಸಬೇಕು’ ಎಂದು ಅರ್ಜಿದಾರರ ಪರ ವಕೀಲರು ಪೀಠದ ಎದುರು ಪ್ರತಿಪಾದಿಸಿದರು.</p>.<p>ಈ ವಿಚಾರದಲ್ಲಿ ಪೀಠಕ್ಕೆ ನೆರವಾಗಲು ನೇಮಿಸಿರುವ ನ್ಯಾಯಾಲಯ ಸಹಾಯಕರು (ಅಮಿಕಸ್ ಕ್ಯೂರಿ) ಕೂಡ, ‘ಆನೆ ಕಾರಿಡಾರ್ಗಳನ್ನು ರೂಪಿಸಿದರೆ ಆನೆಗಳ ಸಾವನ್ನು ಸ್ವಲ್ಪಮಟ್ಟಿಗೆ ತಡೆಯಬಹುದು’ ಎಂದು ತಿಳಿಸಿದರು.</p>.<p>‘ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಇದೇ ವಿಚಾರಕ್ಕೆ ಸಂಬಂಧಿಸಿದ ಕೆಲವು ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ದೇಶದಲ್ಲಿ 27 ಆನೆ ಕಾರಿಡಾರ್ಗಳನ್ನು ರೂಪಿಸಬೇಕು ಎಂಬ ಶಿಫಾರಸುಗಳನ್ನು ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು ಪರಿಗಣಿಸುವ ಸಾಧ್ಯತೆ ಇದೆ ಎಂದು ಈಗಾಗಲೇ ಆ ಪೀಠಕ್ಕೆ ಮಾಹಿತಿ ನೀಡಿದ್ದೇವೆ’ ಎಂದು ನಾಡಕರ್ಣಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>