ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವಿಚಾರವಾದಿಗಳ ವೇದಿಕೆ ಆಯೋಜಿಸಿದ್ದ ಸ್ವತಂತ್ರ ಲಿಂಗಾಯತ ಧರ್ಮ, ಸವಾಲುಗಳು ಕುರಿತ ಸಂವಾದಗೋಷ್ಠಿಯಲ್ಲಿ ಮಾತನಾಡಿದ ಅವರು, ‘12ನೇ ಶತಮಾನ ಸಂದರ್ಭದಲ್ಲಿ ಬಹುತೇಕ ಶರಣರು ಇಂಥ ಮೌಲ್ಯಗಳನ್ನು ವಚನಗಳ ಮೂಲಕ ಪ್ರತಿಪಾದಿಸಿದ್ದರು. ಜನರು ಕೂಡಾ ಅವುಗಳನ್ನು ಒಪ್ಪಿಕೊಂಡಿದ್ದರು. ಆದರೆ, ದೇವರು ಧರ್ಮದ ಮೂಲವಲ್ಲ. ದಯವೇ ಧರ್ಮದ ಮೂಲ ಎನ್ನುವುದು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದ ನೆಲೆಗಟ್ಟಾಗಿತ್ತು’ ಎಂದರು.