‘ನಾನು ಹೋಗಿ ಆ ಕುಟುಂಬದ ಪರಿಸ್ಥಿತಿ ನೋಡಿದ್ದೆ. ವಿಧಾನಸೌಧದಲ್ಲಿ ಕುಟುಂಬದ ಪರವಾಗಿ ನಾನು ಚರ್ಚಿಸದೆ ಇದ್ದಿದ್ದರೆ, 20 ವರ್ಷದ ಹೆಣ್ಣು ಮಗಳು ಭಿಕ್ಷೆ ಬೇಡಕಾಗುತ್ತಿತ್ತು ಅಥವಾ ಕೂಲಿ ಕೆಲಸ ಮಾಡಬೇಕಿತ್ತು ಇಲ್ಲವೇ, ಸಮಾಜದ ಕೆಟ್ಟ ದೃಷ್ಟಿ ಬಿದ್ದು ಮೈ ಮಾರಿಕೊಳ್ಳಬೇಕಾಗುತ್ತಿತ್ತು. ಅಂಥ ಹೆಣ್ಣು ಮಗಳಿಗೆ ಸರ್ಕಾರ ಹೊಸ ಜೀವನ ಕೊಡಬೇಕು ಎಂದು ಹೋರಾಟ ಮಾಡಿದ್ದೆ. ಆಕೆ ಈಗ ಬೈಲಹೊಂಗಲ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಉಪನೋಂದಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಒತ್ತಡ ಹಾಕಿ ಆ ಕುಟುಂಬವನ್ನು ಉಳಿಸಿದ ನನ್ನ ನಡವಳಿಕೆ ಬಗ್ಗೆ ಒಂದು ಉದಾಹರಣೆ ಕೊಡುತ್ತಿದ್ದೇನೆ’ ಎಂದು ತಿಳಿಸಿದರು.