ಇದು ಕಾಂಗ್ರೆಸ್ ಪಕ್ಷದ ಪೂರ್ವಯೋಜಿತ ಪ್ರತಿಭಟನೆ, ಮೊದಲು ಅಲ್ಪಸಂಖ್ಯಾತರು, ಅಲ್ಪಸಂಖ್ಯಾತರು, ನಂತರ ದಲಿತರು ದಲಿತರು, ಇದೀಗ ಮಹಿಳೆಯರು, ಮಹಿಳೆಯರು ಎಂದು ಬೊಬ್ಬೆ ಹಾಕುತ್ತಿದ್ದೀರಿ, ರಾಜ್ಯದ ಸಮಸ್ಯೆಗಳನ್ನು ಕೇಂದ್ರದ ಮೇಲೆ ಹಾಕುವುದು ಯಾಕೆ? ಎಂದು ಮೀನಾಕ್ಷಿ ಲೇಖಿ ಪ್ರಶ್ನಿಸಿದ್ದಾರೆ. ಇದನೆಲ್ಲ ನೋಡಿದರೆ ರಾಜ್ಯ ಸರ್ಕಾರಗಳು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.