ಅಹಮದಾಬಾದ್(ಗುಜರಾತ್): ಇಲ್ಲಿನ ಸಾರಂಗ್ಪುರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರ ವಿರುದ್ಧ ಪ್ರತಿಭಟನೆಯ ಘೋಷಣೆ ಕೂಗಿದ ಐವರನ್ನು ಪೊಲೀಸರು ಬಂಧಿಸಿದರು.
‘ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂದ ಬಿಜೆಪಿ ಸಂಸದರ ವಿರುದ್ಧ ಕೆಲವು ದಲಿತ ಮುಖಂಡರು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯಲು ಐವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
Ahmedabad: Ruckus at an event on the occasion of #AmbedkarJayanti as MLA Jignesh Mevani's supporters tried to obstruct BJP MPs & members from garlanding BR Ambedkar's statue. #Gujaratpic.twitter.com/eghNs9TDfG