ಬೆಂಗಳೂರು: ‘ಜೈನ, ಬೌದ್ಧ, ಕ್ರೈಸ್ತ, ಇಸ್ಲಾಂ ಧರ್ಮಗಳಿಗೆ ಮೂಲಪುರುಷರು ಇದ್ದಾರೆ. ಆದರೆ, ಹಿಂದೂ ಧರ್ಮದ ಮೂಲಪುರುಷ ಯಾರು‘ ಎಂದು ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರದ ನಿರ್ದೇಶಕ ಸಿ. ಬಸವಲಿಂಗಯ್ಯ ಪ್ರಶ್ನಿಸಿದರು.
ದಲಿತ ಸಂಘಟನೆಗಳ ಒಕ್ಕೂಟವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಿಂದೂ ಧರ್ಮಕ್ಕೆ ಅಪ್ಪ–ಅಮ್ಮ ಇಲ್ಲ. ಅದೊಂದು ಬದುಕುವ ಕಲೆ ಎಂದು ಹೇಳುವ ಮನುವಾದಿಗಳು, ಸಮಾಜದಲ್ಲಿ ಮನುಸ್ಮೃತಿ ಬಿತ್ತುವ ಕೆಲಸ ಮಾಡುತ್ತಿದ್ದಾರೆ’ ಎಂದರು.
ಲೇಖಕ ನಟರಾಜ್ ಹುಳಿಯಾರ್, ವಿಚಾರವಾದಿ ಡಾ. ನರಸಿಂಹಯ್ಯ, ಒಕ್ಕೂಟದ ಲಕ್ಷ್ಮೀನಾರಾಯಣ ನಾಗವಾರ, ಗೋಪಾಲಕೃಷ್ಣ ಅರಳಹಳ್ಳಿ, ಯಶೋಧ ಇದ್ದರು.