‘ನಾನು ಕರ್ನಾಟಕ ಬಿಟ್ಟು ಮುಂಬೈನಲ್ಲಿ ವಾಸ ಮಾಡಲು ಬಯಸಿದ್ದೆ. ಆದರೆ, ಅಲ್ಲಿಯ ಹವಾಮಾನ ನನಗೆ ಒಗ್ಗಲಿಲ್ಲ. ಇದು ಒಳ್ಳೆಯದೇ ಆಯಿತು. ಈಗ ಧಾರವಾಡದಲ್ಲಿ ಅನೇಕ ಶಿಷ್ಯರನ್ನು ಬೆಳೆಸುತ್ತಿದ್ದೇನೆ’ ಎಂದು ಸೋಮನಾಥ್ ಹೇಳಿದರು. ‘ಸಂಗೀತ ವಿಶ್ವವಿದ್ಯಾಲಯಗಳು 100ಕ್ಕೆ ಇಂತಿಷ್ಟು ಅಂಕ ಕೊಡುತ್ತವೆ. ಇಂತಹ ಕಡೆ ಸಂಗೀತ ಕಲಿಕೆ ಹೇಗೆ ಸಾಧ್ಯ’ ಎಂದು ರಾಜೀವ್ ತಾರಾನಾಥ್ ಹೇಳಿದರು.