ನರಗುಂದ: ‘ಅಪ್ಪ ಕ್ಯಾನ್ಸರ್ ಪೀಡಿತ, ನಿತ್ಯ ಕಟ್ಟಿಗೆ ಕಡಿಯುವ ಕಾಯಕ. ನಾನು 7ನೇ ಕ್ಲಾಸ್ ಇದ್ದಾಗ, ಅಪ್ಪ ಆಸ್ಪತ್ರೆಯೊಳಗ ಇದ್ದ, ಆಗ ಅಲ್ಲಿಯ ವೈದ್ಯರು ನಮ್ಮನ್ನು ತಿರಸ್ಕಾರದಿಂದ ನೋಡಿದರು. ಮೊದಲ ನಾವು ಬಡವರು. ಅದನ್ನು ನೋಡಿದ ನನಗೆ ನಾನು ವೈದ್ಯನಾಗಲೇಬೇಕೆಂಬ ಸಂಕಲ್ಪ ಮಾಡಿದೆ. ಆದ್ದರಿಂದಲೇ ಪಿಯುಸಿಯಲ್ಲಿ ವಿಜ್ಞಾನ ಪ್ರವೇಶ ಪಡೆದು ಎರಡನೇ ವರ್ಷದಲ್ಲಿ ಹೆಚ್ಚಿನ ಅಂಕ ಗಳಿಸಿದ್ದೇನೆ.’