ಏನಿದು ಪ್ರಕರಣ?
ಹೈದರಾಬಾದ್ನ ಎಂಜಿನಿಯರ್ ಶ್ರೀನಿವಾಸ ಕೂಚಿಭೊಟ್ಲ ಅವರು ತಮ್ಮ ಸ್ನೇಹಿತ ಅಲೋಕ್ ಮದಸಾನಿ ಅವರ ಜತೆಯಲ್ಲಿದ್ದಾಗ ಭಾರತ ಬಿಟ್ಟು ತೊಲಗಿ ಎಂದು ಘೋಷಣೆ ಕೂಗುತ್ತಾ ಕನ್ಸಾಸ್ನಲ್ಲಿ ಪುರಿಂಟನ್ ಗುಂಡು ಹಾರಿಸಿದ್ದನು. ಇದರಲ್ಲಿ ಕೂಚಿಭೋಟ್ಲ ಸಾವಿಗೀಡಾಗಿದ್ದರು. ಮದಸಾನಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಹತ್ಯೆ ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದಿತ್ತು.