<p><strong>ಚೀನದಿಂದ ಬಂಗಾಳಕೊಲ್ಲಿ ಕಡೆ ರಾಕೆಟ್ ಪ್ರಯೋಗ: ಎಂ.ಪಿ.ಗಳ ಆತಂಕ</strong></p>.<p><strong>ನವದೆಹಲಿ, ಮೇ 5–</strong> ಚೀನವು ಸಿಂಕಿಯಾಂಗ್ನಿಂದ ಬಂಗಾಳಕೊಲ್ಲಿಯತ್ತ ರಾಕೆಟ್ಗಳನ್ನು ಹಾರಿಸಿದೆಯೆಂದೂ ಆ ರಾಕೆಟ್ಗಳ ಲೋಹದ ಚೂರುಗಳು ನೇಪಾಳದ ಪ್ರದೇಶದಲ್ಲಿ ಬಿದ್ದಿವೆಯೆಂದೂ ತಿಳಿಸುವ ವರದಿಗಳಿಂದ ಪಾರ್ಲಿಮೆಂಟಿನ ಸದಸ್ಯರಿಗೆ ತೀವ್ರ ಆತಂಕವುಂಟಾಗಿದೆ.</p>.<p>ಈ ವಿಷಯದ ಬಗ್ಗೆ ಸರ್ಕಾರಕ್ಕೆ ಏನಾದರೂ ಸುದ್ದಿ ಬಂದಿದೆಯೇ ಎನ್ನುವುದನ್ನು ಕಂಡುಕೊಳ್ಳಲು ಸದಸ್ಯರು ನಾಳೆ ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುವ ಸಂಭವವಿದೆ.</p>.<p>**</p>.<p><strong>ಲೋಕವೈದ್ಯ’ ಬುದ್ಧನ ಜಯಂತಿ: ಸಕಲವಾರ ಗ್ರಾಮದಲ್ಲಿ ಆಸ್ಪತ್ರೆ ಆರಂಭ</strong></p>.<p><strong>ಬೆಂಗಳೂರು, ಮೇ 5– </strong>ಲೋಕದ ‘ರೋಗ ರುಜಿನಗಳನ್ನು ಕಂಡು, ನೊಂದು ಅವನ್ನು ನೀಗಲು ಸರ್ವತ್ಯಾಗ ಮಾಡಿದ ಭಗವಾನ್ ಬುದ್ಧನ 2512ನೇ ಜನ್ಮದಿನ ಆಚರಣೆ ‘ಚಿಕಿತ್ಸಾಲಯ’ ಉದ್ಘಾಟನೆಯಿಂದ ಇಂದು ಆರಂಭವಾಯಿತು.</p>.<p>ಮಹಾಬೋಧಿ ಸಂಸ್ಥೆಯ ಸೇವಾಕ್ಷೇತ್ರಗಳಲ್ಲಿ ಒಂದಾದ, ನಗರದಿಂದ ಸುಮಾರು 13 ಮೈಲಿ ದೂರದಲ್ಲಿರುವ ಸಕಲವಾರದಲ್ಲಿ ಗ್ರಾಮಾಂತರ ಆಸ್ಪತ್ರೆ ಕಟ್ಟಡವನ್ನು ರಾಜ್ಯಪಾಲ ಶ್ರೀ ಜಿ.ಎಸ್. ಪಾಠಕ್ರವರು ಉದ್ಘಾಟಿಸುವ ಮೂಲಕ ‘ಮಹಾಬೋಧಿ ಸಪ್ತಾಹ’ವನ್ನು ಉದ್ಘಾಟಿಸಿದರು.</p>.<p>**</p>.<p><strong>ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು...</strong></p>.<p><strong>ಕೊಟ್ಟಾಯಂ, ಮೇ 5– </strong>ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರ ಯಶಸ್ಸಿಗೆ ಇಬ್ಬರು ಮಹಿಳೆಯರೇ ಕಾರಣ.</p>.<p>‘ನನ್ನ ಇಂದಿನ ವ್ಯಕ್ತಿತ್ವಕ್ಕೆ ನನ್ನ ತಾಯಿಯ ಉಪದೇಶ ಮತ್ತು ನನ್ನ ಪತ್ನಿಯ ಹೃತ್ಪೂರ್ವಕ ಸಹಕಾರಗಳೇ ಕಾರಣ’ ಎನ್ನುತ್ತಾರೆ ಅವರು.</p>.<p>‘ಸದ್ಯಕ್ಕೆ ನಾನು ನಾಚಿಕೆ ಸ್ವಭಾವದ ವ್ಯಕ್ತಿ’ ಎಂದು ಕರೆದುಕೊಂಡ ಶ್ರೀ ನಿಜಲಿಂಗಪ್ಪನವರು ಇಂದು ಇಲ್ಲಿ ಕೇರಳ ವಿದ್ಯಾವಂತ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ, ಮಹಿಳಾ ಸಮ್ಮೇಳನದಲ್ಲಿ ಭಾಷಣ ಮಾಡಲು ‘ನನಗಿರುವ ಏಕೈಕ ಅರ್ಹತೆ ಎಂದರೆ ನನಗೆ ಪುತ್ರರಿಗಿಂತ ಪುತ್ರಿಯರೇ ಹೆಚ್ಚಾಗಿರುವುದು’ ಎಂದರು.</p>.<p><strong>**</strong></p>.<p><strong>ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ 10 ನಾಮಪತ್ರ</strong></p>.<p><strong>ಬೆಂಗಳೂರು, ಮೇ 5– </strong>ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಒಟ್ಟು 10 ಮಂದಿಯ ಹೆಸರುಗಳು ಸೂಚಿಸಲ್ಪಟ್ಟಿವೆ. ಬೆಂಗಳೂರು ನಗರದಿಂದ ಪರಿಷತ್ತಿನ ಕಾರ್ಯಕಾರಿ ಸಮಿತಿಯ 3 ಸ್ಥಾನಗಳಿಗೆ ನಡೆಯುವ ಚುನಾವ ಣೆಗೆ ಒಟ್ಟು 18 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೀನದಿಂದ ಬಂಗಾಳಕೊಲ್ಲಿ ಕಡೆ ರಾಕೆಟ್ ಪ್ರಯೋಗ: ಎಂ.ಪಿ.ಗಳ ಆತಂಕ</strong></p>.<p><strong>ನವದೆಹಲಿ, ಮೇ 5–</strong> ಚೀನವು ಸಿಂಕಿಯಾಂಗ್ನಿಂದ ಬಂಗಾಳಕೊಲ್ಲಿಯತ್ತ ರಾಕೆಟ್ಗಳನ್ನು ಹಾರಿಸಿದೆಯೆಂದೂ ಆ ರಾಕೆಟ್ಗಳ ಲೋಹದ ಚೂರುಗಳು ನೇಪಾಳದ ಪ್ರದೇಶದಲ್ಲಿ ಬಿದ್ದಿವೆಯೆಂದೂ ತಿಳಿಸುವ ವರದಿಗಳಿಂದ ಪಾರ್ಲಿಮೆಂಟಿನ ಸದಸ್ಯರಿಗೆ ತೀವ್ರ ಆತಂಕವುಂಟಾಗಿದೆ.</p>.<p>ಈ ವಿಷಯದ ಬಗ್ಗೆ ಸರ್ಕಾರಕ್ಕೆ ಏನಾದರೂ ಸುದ್ದಿ ಬಂದಿದೆಯೇ ಎನ್ನುವುದನ್ನು ಕಂಡುಕೊಳ್ಳಲು ಸದಸ್ಯರು ನಾಳೆ ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುವ ಸಂಭವವಿದೆ.</p>.<p>**</p>.<p><strong>ಲೋಕವೈದ್ಯ’ ಬುದ್ಧನ ಜಯಂತಿ: ಸಕಲವಾರ ಗ್ರಾಮದಲ್ಲಿ ಆಸ್ಪತ್ರೆ ಆರಂಭ</strong></p>.<p><strong>ಬೆಂಗಳೂರು, ಮೇ 5– </strong>ಲೋಕದ ‘ರೋಗ ರುಜಿನಗಳನ್ನು ಕಂಡು, ನೊಂದು ಅವನ್ನು ನೀಗಲು ಸರ್ವತ್ಯಾಗ ಮಾಡಿದ ಭಗವಾನ್ ಬುದ್ಧನ 2512ನೇ ಜನ್ಮದಿನ ಆಚರಣೆ ‘ಚಿಕಿತ್ಸಾಲಯ’ ಉದ್ಘಾಟನೆಯಿಂದ ಇಂದು ಆರಂಭವಾಯಿತು.</p>.<p>ಮಹಾಬೋಧಿ ಸಂಸ್ಥೆಯ ಸೇವಾಕ್ಷೇತ್ರಗಳಲ್ಲಿ ಒಂದಾದ, ನಗರದಿಂದ ಸುಮಾರು 13 ಮೈಲಿ ದೂರದಲ್ಲಿರುವ ಸಕಲವಾರದಲ್ಲಿ ಗ್ರಾಮಾಂತರ ಆಸ್ಪತ್ರೆ ಕಟ್ಟಡವನ್ನು ರಾಜ್ಯಪಾಲ ಶ್ರೀ ಜಿ.ಎಸ್. ಪಾಠಕ್ರವರು ಉದ್ಘಾಟಿಸುವ ಮೂಲಕ ‘ಮಹಾಬೋಧಿ ಸಪ್ತಾಹ’ವನ್ನು ಉದ್ಘಾಟಿಸಿದರು.</p>.<p>**</p>.<p><strong>ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು...</strong></p>.<p><strong>ಕೊಟ್ಟಾಯಂ, ಮೇ 5– </strong>ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರ ಯಶಸ್ಸಿಗೆ ಇಬ್ಬರು ಮಹಿಳೆಯರೇ ಕಾರಣ.</p>.<p>‘ನನ್ನ ಇಂದಿನ ವ್ಯಕ್ತಿತ್ವಕ್ಕೆ ನನ್ನ ತಾಯಿಯ ಉಪದೇಶ ಮತ್ತು ನನ್ನ ಪತ್ನಿಯ ಹೃತ್ಪೂರ್ವಕ ಸಹಕಾರಗಳೇ ಕಾರಣ’ ಎನ್ನುತ್ತಾರೆ ಅವರು.</p>.<p>‘ಸದ್ಯಕ್ಕೆ ನಾನು ನಾಚಿಕೆ ಸ್ವಭಾವದ ವ್ಯಕ್ತಿ’ ಎಂದು ಕರೆದುಕೊಂಡ ಶ್ರೀ ನಿಜಲಿಂಗಪ್ಪನವರು ಇಂದು ಇಲ್ಲಿ ಕೇರಳ ವಿದ್ಯಾವಂತ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ, ಮಹಿಳಾ ಸಮ್ಮೇಳನದಲ್ಲಿ ಭಾಷಣ ಮಾಡಲು ‘ನನಗಿರುವ ಏಕೈಕ ಅರ್ಹತೆ ಎಂದರೆ ನನಗೆ ಪುತ್ರರಿಗಿಂತ ಪುತ್ರಿಯರೇ ಹೆಚ್ಚಾಗಿರುವುದು’ ಎಂದರು.</p>.<p><strong>**</strong></p>.<p><strong>ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ 10 ನಾಮಪತ್ರ</strong></p>.<p><strong>ಬೆಂಗಳೂರು, ಮೇ 5– </strong>ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಒಟ್ಟು 10 ಮಂದಿಯ ಹೆಸರುಗಳು ಸೂಚಿಸಲ್ಪಟ್ಟಿವೆ. ಬೆಂಗಳೂರು ನಗರದಿಂದ ಪರಿಷತ್ತಿನ ಕಾರ್ಯಕಾರಿ ಸಮಿತಿಯ 3 ಸ್ಥಾನಗಳಿಗೆ ನಡೆಯುವ ಚುನಾವ ಣೆಗೆ ಒಟ್ಟು 18 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>