ಹನುಮಸಾಗರ: ತೂಕದ ಬಂಡಿಗಳ ಬದಲು ಹಗುರಾದ ಸಿದ್ಧ ಬಂಡಿಗಳತ್ತ ರೈತರು ಒಂದೆಡೆ ಮೊರೆ ಹೋಗಿದ್ದರೆ, ಮತ್ತೊಂದೆಡೆ ಕಮ್ಮಾರ, ಬಡಿಗೇರ ಕುಲುಮೆಗಳಲ್ಲಿ ಬಂಡಿಗಳ ತಯಾರಿಕೆ ಕಡಿಮೆಯಾಗಿದೆ. ಆದರೆ, ಹನುಮಸಾಗರದ 14 ವಯಸ್ಸಿನ ಬಾಲಕ ವಿಶ್ವಜ್ಞ ವಿಶ್ವಕರ್ಮ ತಯಾರಿಸುವ ಬಣ್ಣದ ಬಂಡಿಗಳಿಗೆ ಮಾತ್ರ ಬೇಡಿಕೆ ಕುಸಿದಿಲ್ಲ. ಬಂಡಿಗಳ ಖರೀದಿಗೆ ಹಿರಿಯರು ಮತ್ತು ಕಿರಿಯರು ಮುಗಿಬೀಳುತ್ತಾರೆ.