ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕವು ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ. ಇಲ್ಲಿನ ಜನರು ಶಾಂತಿ ಪ್ರಿಯರು, ಕೋಮು ಸೌಹಾರ್ದತೆಗೆ ಹೆಸರಾದವರು. ಆದರೆ, ಪ್ರಧಾನಿ ಮೋದಿ ಅವರು ಬೆಂಗಳೂರಿನ ಪ್ರತಿಷ್ಠೆಗೆ ಧಕ್ಕೆ ತರುವ ಮಾತುಗಳನ್ನಾಡಿದ್ದಾರೆ. ನನ್ನ ತಂದೆಯ ಕಾಲದಿಂದಲೂ ಬೆಂಗಳೂರಿನೊಂದಿಗೆ ಉತ್ತಮ ಒಡನಾಟ ಇದೆ. ಇಲ್ಲಿನ ಪರಿಸರ ಒಳ್ಳೆಯದು, ಜನಗಳು ಒಳ್ಳೆಯವರು’ ಎಂದರು.