<p><strong>ಬೆಂಗಳೂರು:</strong> ಶುಕ್ರವಾರ ಮುಸ್ಸಂಜೆಯಲ್ಲಿ ಕಚಗುಳಿಯಿಡುವ ಚಳಿಯಲ್ಲಿ ಆರಂಭಿಕ ಬ್ಯಾಟರ್ ವಿಶ್ವರಾಜ್ ಜಡೇಜ ಅಮೋಘ ಶತಕ ದಾಖಲಿಸಿದರು. ಅವರ ಆಟದ ಬಲದಿಂದ ಸೌರಾಷ್ಟ್ರ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು. </p>.<p>ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರವು ವಿದರ್ಭ ತಂಡವನ್ನು ಎದುರಿಸಲಿದೆ. ಗುರುವಾರ ನಡೆದಿದ್ದ ಮೊದಲ ಸೆಮಿಫೈನಲ್ನಲ್ಲಿ ವಿದರ್ಭ ತಂಡವು ಕರ್ನಾಟಕದ ಎದುರು ಗೆದ್ದಿತ್ತು. </p>.<p>ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ಪಂಜಾಬ್ ತಂಡವು ಒಡ್ಡಿದ 292ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಸೌರಾಷ್ಟವು 9 ವಿಕೆಟ್ಗಳ ಜಯ ಸಾಧಿಸಲು ವಿಶ್ವರಾಜ್ (ಅಜೇಯ 161; 126ಎ, 4X17, 6X3) ಶತಕ ಕಾರಣವಾಯಿತು. ಅವರು ಮತ್ತು ನಾಯಕ ಹರ್ವಿಕ್ ದೇಸಾಯಿ (64; 63ಎ, 4X9) ಮೊದಲ ವಿಕೆಟ್ ಜೊತೆಯಾಟದಲ್ಲಿ 23 ಓವರ್ಗಳಲ್ಲಿ 167 ರನ್ ಸೇರಿಸಿದರು. ಇದರಿಂದಾಗಿ ಜಯ ಸುಲಭವಾಯಿತು. ಎರಡು ಸಲದ ಚಾಂಪಿಯನ್ ಸೌರಾಷ್ಟ್ರವು ಗೆಲುವಿನ ಗುರಿ ಸಾಧಿಸಿದಾಗ ಇನ್ನೂ 10.3 ಓವರ್ಗಳಲ್ಲಿ ಬಾಕಿ ಇದ್ದವು. </p>.<p>27 ವರ್ಷದ ಜಡೇಜ ಅವರು ಪಂಜಾಬ್ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದರು. ಫ್ಲಿಕ್, ಕಟ್ ಮತ್ತು ಡ್ರೈವ್ಗಳನ್ನು ಆರಂಭದಿಂದಲೇ ಪ್ರಯೋಗಿಸಿದರು. ಅವರು 120 ರನ್ ಗಳಿಸಿದ್ದ ಸಮದರ್ಭದಲ್ಲಿ ಡೀಪ್ ಮಿಡ್ವಿಕೆಟ್ನಲ್ಲಿದ್ದ ಫೀಲ್ಡರ್ ಕ್ಯಾಚ್ ಕೈಚೆಲ್ಲಿದರು. </p>.<p>ಟಾಸ್ ಗೆದ್ದ ಸೌರಾಷ್ಟ್ರ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನ್ಮೋಲ್ ಪ್ರೀತ್ ಸಿಂಗ್ (100; 105ಎ, 4X9, 6X1) ಶತಕ ಮತ್ತು ಪ್ರಭಸಿಮ್ರನ್ ಸಿಂಗ್ (87; 89ಎ, 4X9, 6X3) ಅರ್ಧಶತಕದ ಬಲದಿಂದ ಪಂಜಾಬ್ ತಂಡವು 50 ಓವರ್ಗಳಲ್ಲಿ 291 ರನ್ ಗಳಿಸಿತು. ಸೌರಾಷ್ಟ್ರದ ವೇಗಿ ಚೇತನ್ ಸಕಾರಿಯಾ (60ಕ್ಕೆ4), ಅಂಕುರ್ ಪನ್ವರ್ (54ಕ್ಕೆ2) ಮತ್ತು ಚಿರಾಗ್ ಜಾನಿ (73ಕ್ಕೆ2) ಉತ್ತಮ ಬೌಲಿಂಗ್ ಮಾಡಿದರು. </p>.<h2>ಸಂಕ್ಷಿಪ್ತ ಸ್ಕೋರು:</h2>.<p> <strong>ಪಂಜಾಬ್:</strong> 50 ಓವರ್ಗಳಲ್ಲಿ 291 (ಹರ್ನೂರ್ ಸಿಂಗ್ 33, ಪ್ರಭಸಿಮ್ರನ್ ಸಿಂಗ್ 87, ಅನ್ಮೋಲ್ಪ್ರೀತ್ ಸಿಂಗ್ 100, ರಮಣದೀಪ್ ಸಿಂಗ್ 42, ಚೇತನ್ ಸಕಾರಿಯಾ 60ಕ್ಕೆ4, ಅಂಕುರ್ ಪನ್ವರ್ 54ಕ್ಕೆ2, ಚಿರಾಗ್ ಜಾನಿ 73ಕ್ಕೆ2) </p><p><strong>ಸೌರಾಷ್ಟ್ರ:</strong> 39.3 ಓವರ್ಗಳಲ್ಲಿ 1 ವಿಕೆಟ್ಗೆ 293 (ಹರ್ವಿಕ್ ದೇಸಾಯಿ 64, ವಿಶ್ವರಾಜ್ ಜಡೇಜ ಔಟಾಗದೇ 165, ಪ್ರೇರಕ್ ಮಂಕಡ್ ಔಟಾಗದೇ 52) ಸೌರಾಷ್ಟ್ರ ತಂಡಕ್ಕೆ 9 ವಿಕೆಟ್ ಜಯ. ಪಂದ್ಯದ ಆಟಗಾರ: ವಿಶ್ವರಾಜ್ ಜಡೇಜ. </p>.<p><em><strong>ಫೈನಲ್: ವಿದರ್ಭ–ಸೌರಾಷ್ಟ್ರ (ಜ.18)</strong></em></p><p><em><strong>ಸ್ಥಳ: ಬಿಸಿಸಿಐ ಸಿಒಇ ಮೈದಾನ</strong></em> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಶುಕ್ರವಾರ ಮುಸ್ಸಂಜೆಯಲ್ಲಿ ಕಚಗುಳಿಯಿಡುವ ಚಳಿಯಲ್ಲಿ ಆರಂಭಿಕ ಬ್ಯಾಟರ್ ವಿಶ್ವರಾಜ್ ಜಡೇಜ ಅಮೋಘ ಶತಕ ದಾಖಲಿಸಿದರು. ಅವರ ಆಟದ ಬಲದಿಂದ ಸೌರಾಷ್ಟ್ರ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು. </p>.<p>ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರವು ವಿದರ್ಭ ತಂಡವನ್ನು ಎದುರಿಸಲಿದೆ. ಗುರುವಾರ ನಡೆದಿದ್ದ ಮೊದಲ ಸೆಮಿಫೈನಲ್ನಲ್ಲಿ ವಿದರ್ಭ ತಂಡವು ಕರ್ನಾಟಕದ ಎದುರು ಗೆದ್ದಿತ್ತು. </p>.<p>ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ಪಂಜಾಬ್ ತಂಡವು ಒಡ್ಡಿದ 292ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಸೌರಾಷ್ಟವು 9 ವಿಕೆಟ್ಗಳ ಜಯ ಸಾಧಿಸಲು ವಿಶ್ವರಾಜ್ (ಅಜೇಯ 161; 126ಎ, 4X17, 6X3) ಶತಕ ಕಾರಣವಾಯಿತು. ಅವರು ಮತ್ತು ನಾಯಕ ಹರ್ವಿಕ್ ದೇಸಾಯಿ (64; 63ಎ, 4X9) ಮೊದಲ ವಿಕೆಟ್ ಜೊತೆಯಾಟದಲ್ಲಿ 23 ಓವರ್ಗಳಲ್ಲಿ 167 ರನ್ ಸೇರಿಸಿದರು. ಇದರಿಂದಾಗಿ ಜಯ ಸುಲಭವಾಯಿತು. ಎರಡು ಸಲದ ಚಾಂಪಿಯನ್ ಸೌರಾಷ್ಟ್ರವು ಗೆಲುವಿನ ಗುರಿ ಸಾಧಿಸಿದಾಗ ಇನ್ನೂ 10.3 ಓವರ್ಗಳಲ್ಲಿ ಬಾಕಿ ಇದ್ದವು. </p>.<p>27 ವರ್ಷದ ಜಡೇಜ ಅವರು ಪಂಜಾಬ್ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದರು. ಫ್ಲಿಕ್, ಕಟ್ ಮತ್ತು ಡ್ರೈವ್ಗಳನ್ನು ಆರಂಭದಿಂದಲೇ ಪ್ರಯೋಗಿಸಿದರು. ಅವರು 120 ರನ್ ಗಳಿಸಿದ್ದ ಸಮದರ್ಭದಲ್ಲಿ ಡೀಪ್ ಮಿಡ್ವಿಕೆಟ್ನಲ್ಲಿದ್ದ ಫೀಲ್ಡರ್ ಕ್ಯಾಚ್ ಕೈಚೆಲ್ಲಿದರು. </p>.<p>ಟಾಸ್ ಗೆದ್ದ ಸೌರಾಷ್ಟ್ರ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನ್ಮೋಲ್ ಪ್ರೀತ್ ಸಿಂಗ್ (100; 105ಎ, 4X9, 6X1) ಶತಕ ಮತ್ತು ಪ್ರಭಸಿಮ್ರನ್ ಸಿಂಗ್ (87; 89ಎ, 4X9, 6X3) ಅರ್ಧಶತಕದ ಬಲದಿಂದ ಪಂಜಾಬ್ ತಂಡವು 50 ಓವರ್ಗಳಲ್ಲಿ 291 ರನ್ ಗಳಿಸಿತು. ಸೌರಾಷ್ಟ್ರದ ವೇಗಿ ಚೇತನ್ ಸಕಾರಿಯಾ (60ಕ್ಕೆ4), ಅಂಕುರ್ ಪನ್ವರ್ (54ಕ್ಕೆ2) ಮತ್ತು ಚಿರಾಗ್ ಜಾನಿ (73ಕ್ಕೆ2) ಉತ್ತಮ ಬೌಲಿಂಗ್ ಮಾಡಿದರು. </p>.<h2>ಸಂಕ್ಷಿಪ್ತ ಸ್ಕೋರು:</h2>.<p> <strong>ಪಂಜಾಬ್:</strong> 50 ಓವರ್ಗಳಲ್ಲಿ 291 (ಹರ್ನೂರ್ ಸಿಂಗ್ 33, ಪ್ರಭಸಿಮ್ರನ್ ಸಿಂಗ್ 87, ಅನ್ಮೋಲ್ಪ್ರೀತ್ ಸಿಂಗ್ 100, ರಮಣದೀಪ್ ಸಿಂಗ್ 42, ಚೇತನ್ ಸಕಾರಿಯಾ 60ಕ್ಕೆ4, ಅಂಕುರ್ ಪನ್ವರ್ 54ಕ್ಕೆ2, ಚಿರಾಗ್ ಜಾನಿ 73ಕ್ಕೆ2) </p><p><strong>ಸೌರಾಷ್ಟ್ರ:</strong> 39.3 ಓವರ್ಗಳಲ್ಲಿ 1 ವಿಕೆಟ್ಗೆ 293 (ಹರ್ವಿಕ್ ದೇಸಾಯಿ 64, ವಿಶ್ವರಾಜ್ ಜಡೇಜ ಔಟಾಗದೇ 165, ಪ್ರೇರಕ್ ಮಂಕಡ್ ಔಟಾಗದೇ 52) ಸೌರಾಷ್ಟ್ರ ತಂಡಕ್ಕೆ 9 ವಿಕೆಟ್ ಜಯ. ಪಂದ್ಯದ ಆಟಗಾರ: ವಿಶ್ವರಾಜ್ ಜಡೇಜ. </p>.<p><em><strong>ಫೈನಲ್: ವಿದರ್ಭ–ಸೌರಾಷ್ಟ್ರ (ಜ.18)</strong></em></p><p><em><strong>ಸ್ಥಳ: ಬಿಸಿಸಿಐ ಸಿಒಇ ಮೈದಾನ</strong></em> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>