<p>‘ನೋಡ್ತಿರು... ಈ ಸಲ ಕಪ್ ಟ್ರಂಪಣ್ಣಂದೇ!’ ಎಂದು ಬೆಕ್ಕಣ್ಣ ಉದ್ಗರಿಸಿತು.</p><p>‘ಅಲ್ಲಲೇ... ಇಸ್ರೇಲ್ ಜೊತಿ ಸೇರಿ ಅಂವಾ ಇರಾನ್ ಮ್ಯಾಲೆ ಆಕ್ರಮಣ ಮಾಡ್ಯಾನೆ. ಅಂವನಿಗೆಂಥ ಕಪ್ ಕೊಡ್ತಾರಲೇ?’ ಎಂದೆ.</p><p>‘ಈಗ ಅಂವಾ ಇರಾನಿನ ಮೇಲೆ ಯುದ್ಧ ಮಾಡಿ, ದುಷ್ಟ ಮಂದಿಯ ಕೊಂದು, ಅಲ್ಲಿ ನಾಗರಿಕರ ರಕ್ಷಣೆ ಮಾಡ್ಯಾನಲ್ಲ... ಹಿಂಗಾಗಿ ಈ ಸಲ ನೊಬೆಲ್ ಕಪ್ ಅಂವಂದೇ!’ ಎಂದು ಬೆಕ್ಕಣ್ಣ ವದರಿತು.</p><p>‘ಯುದ್ಧದ ನಿರ್ಣಯವನ್ನ ಸರ್ವಾಧಿಕಾರಿ ಹಂಗೆ ಅಂವನೇ ಖುದ್ದು ತಗಂಡಾನೆ. ಅಲ್ಲೀ ಕಾಂಗ್ರೆಸ್ ಒಪ್ಪಿಗೆ ಸೈತ ತಗಂಡಿಲ್ಲ. ಎಷ್ಟ್ ಮಂದಿ ಅಮಾಯಕರು ಪ್ರಾಣ ಕಳಕೊಂಡಾರೆ... ಅಂವನೆಂಥ ಶಾಂತಿದೂತ ಅಂತ ಅಂವಂಗೆ ನೊಬೆಲ್ ಶಾಂತಿ ಕಪ್ ಕೊಡ್ತಾರಲೇ?’ ಎಂದೆ ಸಿಟ್ಟಿನಿಂದ.</p><p>‘ಅಂವ ಒಂಥರಾ ದೇವದೂತನ ಹಂಗೆ! ವಿಶ್ವದ ಎಲ್ಲಾ ದೇಶಗಳ ಮೇಲೆ ಯುದ್ಧ ಸಾರಿ, ಆ ಯುದ್ಧವನ್ನ ಕೊನಿಗಿ ತಾನೆ ನಿಲ್ಲಿಸಿದೆ ಅಂತ ಘೋಷಣೆ ಮಾಡೂ ಹಕ್ಕು ಅಂವನಿಗದ!’ ಎಂದು ಬೆಕ್ಕಣ್ಣ ವಾದಿಸಿತು.</p><p>‘ಅಲ್ಲಿ ಅಂವಾ ಶಾಂತಿ ಕಪ್ಗಾಗಿ ಥರೇವಾರಿ ಯುದ್ಧ ನಡೆಸ್ಯಾನೆ... ಇಲ್ಲಿ ಡಿಕೇಶಣ್ಣನೂ ಸಿಎಂ ಕುರ್ಚಿಗಾಗಿ ಹೋರಾಟ ನಡೆಸ್ಯಾನೆ’ ಎಂದು ನಾನು ತಲೆ ಚಚ್ಚಿಕೊಂಡೆ.</p><p>‘ಎಲ್ಲಾ ಥರದ ಪ್ರಯತ್ನ ಮುಗಿದು ಈಗ ಅದೇನೋ ಶಾಸಕರಿಂದ ಲವ್ಲೆಟ್ರೂ ಬರಸಾಕೆ ಹತ್ಯಾರೆ. ಸ್ವತಃ ಖರ್ಗೆ ಅಜ್ಜಾರಿಂದ ಹಿಡಿದು ಎಷ್ಟ್ ಮಂದಿ ಕ್ಯೂವಳಗೆ ನಿಂತಾರೆ!’ ಬೆಕ್ಕಣ್ಣ ಉದ್ಗರಿಸಿತು.</p><p>‘ಈ ಕ್ಯೂಗೆ ಹೊಸ ಸೇರ್ಪಡೆ ಕುಮಾರಣ್ಣ! ಕುಮಾರಣ್ಣನ್ನ (ಮುಂದೆಂದಾದರೂ!) ಸಿಎಂ ಮಾಡೂದು ಮೋದಿಮಾಮಾ–ಶಾ ಅಂಕಲ್ಲಿನ ಕೈವಳಗೆ ಐತೆ ಅಂತ ದೇಗೌ ಅಜ್ಜಾರು ಕಣ್ಣೀರು ಹಾಕ್ಯಾರಂತೆ!’ ಎಂದೆ ನಾನು.</p><p>‘ಹೈಕಮಾಂಡು ಬಿಡು, ಕರುನಾಡಿನ ಸಿಎಂ ಕುರ್ಚಿ ಯುದ್ಧವನ್ನು ಸ್ವತಃ ದೇವರಿಗೂ ಬಗೆಹರಿಸಕ್ಕೆ ಆಗಂಗಿಲ್ಲ!’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನೋಡ್ತಿರು... ಈ ಸಲ ಕಪ್ ಟ್ರಂಪಣ್ಣಂದೇ!’ ಎಂದು ಬೆಕ್ಕಣ್ಣ ಉದ್ಗರಿಸಿತು.</p><p>‘ಅಲ್ಲಲೇ... ಇಸ್ರೇಲ್ ಜೊತಿ ಸೇರಿ ಅಂವಾ ಇರಾನ್ ಮ್ಯಾಲೆ ಆಕ್ರಮಣ ಮಾಡ್ಯಾನೆ. ಅಂವನಿಗೆಂಥ ಕಪ್ ಕೊಡ್ತಾರಲೇ?’ ಎಂದೆ.</p><p>‘ಈಗ ಅಂವಾ ಇರಾನಿನ ಮೇಲೆ ಯುದ್ಧ ಮಾಡಿ, ದುಷ್ಟ ಮಂದಿಯ ಕೊಂದು, ಅಲ್ಲಿ ನಾಗರಿಕರ ರಕ್ಷಣೆ ಮಾಡ್ಯಾನಲ್ಲ... ಹಿಂಗಾಗಿ ಈ ಸಲ ನೊಬೆಲ್ ಕಪ್ ಅಂವಂದೇ!’ ಎಂದು ಬೆಕ್ಕಣ್ಣ ವದರಿತು.</p><p>‘ಯುದ್ಧದ ನಿರ್ಣಯವನ್ನ ಸರ್ವಾಧಿಕಾರಿ ಹಂಗೆ ಅಂವನೇ ಖುದ್ದು ತಗಂಡಾನೆ. ಅಲ್ಲೀ ಕಾಂಗ್ರೆಸ್ ಒಪ್ಪಿಗೆ ಸೈತ ತಗಂಡಿಲ್ಲ. ಎಷ್ಟ್ ಮಂದಿ ಅಮಾಯಕರು ಪ್ರಾಣ ಕಳಕೊಂಡಾರೆ... ಅಂವನೆಂಥ ಶಾಂತಿದೂತ ಅಂತ ಅಂವಂಗೆ ನೊಬೆಲ್ ಶಾಂತಿ ಕಪ್ ಕೊಡ್ತಾರಲೇ?’ ಎಂದೆ ಸಿಟ್ಟಿನಿಂದ.</p><p>‘ಅಂವ ಒಂಥರಾ ದೇವದೂತನ ಹಂಗೆ! ವಿಶ್ವದ ಎಲ್ಲಾ ದೇಶಗಳ ಮೇಲೆ ಯುದ್ಧ ಸಾರಿ, ಆ ಯುದ್ಧವನ್ನ ಕೊನಿಗಿ ತಾನೆ ನಿಲ್ಲಿಸಿದೆ ಅಂತ ಘೋಷಣೆ ಮಾಡೂ ಹಕ್ಕು ಅಂವನಿಗದ!’ ಎಂದು ಬೆಕ್ಕಣ್ಣ ವಾದಿಸಿತು.</p><p>‘ಅಲ್ಲಿ ಅಂವಾ ಶಾಂತಿ ಕಪ್ಗಾಗಿ ಥರೇವಾರಿ ಯುದ್ಧ ನಡೆಸ್ಯಾನೆ... ಇಲ್ಲಿ ಡಿಕೇಶಣ್ಣನೂ ಸಿಎಂ ಕುರ್ಚಿಗಾಗಿ ಹೋರಾಟ ನಡೆಸ್ಯಾನೆ’ ಎಂದು ನಾನು ತಲೆ ಚಚ್ಚಿಕೊಂಡೆ.</p><p>‘ಎಲ್ಲಾ ಥರದ ಪ್ರಯತ್ನ ಮುಗಿದು ಈಗ ಅದೇನೋ ಶಾಸಕರಿಂದ ಲವ್ಲೆಟ್ರೂ ಬರಸಾಕೆ ಹತ್ಯಾರೆ. ಸ್ವತಃ ಖರ್ಗೆ ಅಜ್ಜಾರಿಂದ ಹಿಡಿದು ಎಷ್ಟ್ ಮಂದಿ ಕ್ಯೂವಳಗೆ ನಿಂತಾರೆ!’ ಬೆಕ್ಕಣ್ಣ ಉದ್ಗರಿಸಿತು.</p><p>‘ಈ ಕ್ಯೂಗೆ ಹೊಸ ಸೇರ್ಪಡೆ ಕುಮಾರಣ್ಣ! ಕುಮಾರಣ್ಣನ್ನ (ಮುಂದೆಂದಾದರೂ!) ಸಿಎಂ ಮಾಡೂದು ಮೋದಿಮಾಮಾ–ಶಾ ಅಂಕಲ್ಲಿನ ಕೈವಳಗೆ ಐತೆ ಅಂತ ದೇಗೌ ಅಜ್ಜಾರು ಕಣ್ಣೀರು ಹಾಕ್ಯಾರಂತೆ!’ ಎಂದೆ ನಾನು.</p><p>‘ಹೈಕಮಾಂಡು ಬಿಡು, ಕರುನಾಡಿನ ಸಿಎಂ ಕುರ್ಚಿ ಯುದ್ಧವನ್ನು ಸ್ವತಃ ದೇವರಿಗೂ ಬಗೆಹರಿಸಕ್ಕೆ ಆಗಂಗಿಲ್ಲ!’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>