ಉದ್ದೇಶಿತ ಸ್ಮಾರಕದ ‘ಮಂಟಪ‘ ಎಐಎಡಿಎಂಕೆ ಸ್ಥಾಪಕರೂ ಆಗಿದ್ದ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಸ್ಮಾರಕದ ಹಿಂದೆಯೇ ಇದೆ. ಜಯಾ ಅವರು 2016ರ ಡಿಸೆಂಬರ್ 5ರಂದು ಮೃತಪಟ್ಟಿದ್ದರು. ಮರೀನಾ ಬೀಚ್ನಲ್ಲಿ ‘ಅಮ್ಮ’ ಸ್ಮಾರಕವನ್ನು ₹50.8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಬಜೆಟ್ ಅಧಿವೇಶನದಲ್ಲೂ ಪನ್ನೀರ್ಸೆಲ್ವಂ ಹೇಳಿದ್ದರು.