<p><strong>ಹೈದರಾಬಾದ್: </strong>‘ಸನ್ರೈಸರ್ಸ್ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಕಳಪೆ ಆಟವಾಡಿದೆವು. ಸೋಲಲು ನಾವು ಅರ್ಹರು’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.</p>.<p>ಸೋಮವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ ನಡೆದ ಸುದ್ದಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>ಈ ಪಂದ್ಯದಲ್ಲಿ ಆರ್ಸಿಬಿಯು ಐದು ರನ್ಗಳಿಂದ ಸೋತಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ರೈಸರ್ಸ್, 146 ರನ್ಗಳಿಗೆ ಆಲೌಟಾಗಿತ್ತು. ಗುರಿ ಬೆನ್ನತ್ತಿದ ಆರ್ಸಿಬಿಯು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿತು.</p>.<p>‘ನಾವು ತೋರಿದ ಸಾಮರ್ಥ್ಯ ಉತ್ತಮವಾಗಿರಲಿಲ್ಲ. ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಲು ಬೇಕಾದ ಛಲ ನಮ್ಮ ಆಟದಲ್ಲಿ ಕಾಣಿಸಲಿಲ್ಲ. ತಂಡದ ಶಕ್ತಿಗೆ ಅನುಗುಣವಾಗಿ ಈ ಆವೃತ್ತಿಯಲ್ಲಿ ನಾವು ಸಾಧನೆ ತೋರಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.</p>.<p>‘ಕೊನೆಯ ಮೂರು ಓವರ್ಗಳಲ್ಲಿ ಪಂದ್ಯದ ಗತಿ ಬದಲಿಸಿದ ಸನ್ರೈಸರ್ಸ್ನ ಬೌಲಿಂಗ್ ಅದ್ಬುತವಾಗಿತ್ತು. ಅಂತಹ ಒತ್ತಡದಲ್ಲಿಯೂ ಸ್ಥಿರತೆ ಕಳೆದುಕೊಳ್ಳದೇ ಪಂದ್ಯ ಗೆಲ್ಲಿಸಿದ ಸಿದ್ಧಾರ್ಥ್ ಕೌಲ್ ಹಾಗೂ ಭುವನೇಶ್ವರ್ ಕುಮಾರ್ ಅವರು ಶ್ಲಾಘನೆಗೆ ಅರ್ಹರು’ ಎಂದು ಭಾರತ ತಂಡದ ನಾಯಕ ಹೇಳಿದರು.</p>.<p>‘ಬೌಲಿಂಗ್ ವಿಭಾಗದಲ್ಲಿ ಸನ್ರೈಸರ್ಸ್ ತಂಡವು ಅತ್ಯಂತ ಬಲಿಷ್ಠವಾಗಿದೆ. ಆದರೆ, ಎಲ್ಲ ವಿಭಾಗಗಳನ್ನೂ ಪರಿಗಣಿಸಿದರೆ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಶಕ್ತಿಯುತವಾಗಿವೆ’ ಎಂದು ಅವರು ತಿಳಿಸಿದರು.</p>.<p><strong>‘ಗುರಿಯು ಸವಾಲಿನಿಂದ ಕೂಡಿತ್ತು’:</strong> ‘ಬೌಲಿಂಗ್ಗೆ ಹೆಚ್ಚು ಅನುಕೂಲಕರವಾಗಿದ್ದ ಆ ಪಿಚ್ನಲ್ಲಿ 150 ರನ್ಗಳ ಗುರಿಯು ಹೆಚ್ಚು ಸವಾಲಿನಿಂದ ಕೂಡಿ<br /> ರುತ್ತದೆ’ ಎಂದು ಸನ್ರೈಸರ್ಸ್ ತಂಡದ ಕೇನ್ ವಿಲಿಯಮ್ಸನ್ ಹೇಳಿದರು.</p>.<p>‘ಬ್ಯಾಟಿಂಗ್ ಮಾಡಲು ಅಂಗಳಕ್ಕಿಳಿಯುವ ಮುಂಚೆಯೇ 150 ರನ್ಗಳನ್ನು ಗಳಿಸಿದರೆ ಎದುರಾಳಿಗಳನ್ನು ಕಟ್ಟಿಹಾಕಬಹುದು ಎಂಬ ಯೋಜನೆ ಸಿದ್ಧಪಡಿಸಿಕೊಂಡಿದ್ದೆವು’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್: </strong>‘ಸನ್ರೈಸರ್ಸ್ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಕಳಪೆ ಆಟವಾಡಿದೆವು. ಸೋಲಲು ನಾವು ಅರ್ಹರು’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.</p>.<p>ಸೋಮವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ ನಡೆದ ಸುದ್ದಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>ಈ ಪಂದ್ಯದಲ್ಲಿ ಆರ್ಸಿಬಿಯು ಐದು ರನ್ಗಳಿಂದ ಸೋತಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ರೈಸರ್ಸ್, 146 ರನ್ಗಳಿಗೆ ಆಲೌಟಾಗಿತ್ತು. ಗುರಿ ಬೆನ್ನತ್ತಿದ ಆರ್ಸಿಬಿಯು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿತು.</p>.<p>‘ನಾವು ತೋರಿದ ಸಾಮರ್ಥ್ಯ ಉತ್ತಮವಾಗಿರಲಿಲ್ಲ. ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಲು ಬೇಕಾದ ಛಲ ನಮ್ಮ ಆಟದಲ್ಲಿ ಕಾಣಿಸಲಿಲ್ಲ. ತಂಡದ ಶಕ್ತಿಗೆ ಅನುಗುಣವಾಗಿ ಈ ಆವೃತ್ತಿಯಲ್ಲಿ ನಾವು ಸಾಧನೆ ತೋರಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.</p>.<p>‘ಕೊನೆಯ ಮೂರು ಓವರ್ಗಳಲ್ಲಿ ಪಂದ್ಯದ ಗತಿ ಬದಲಿಸಿದ ಸನ್ರೈಸರ್ಸ್ನ ಬೌಲಿಂಗ್ ಅದ್ಬುತವಾಗಿತ್ತು. ಅಂತಹ ಒತ್ತಡದಲ್ಲಿಯೂ ಸ್ಥಿರತೆ ಕಳೆದುಕೊಳ್ಳದೇ ಪಂದ್ಯ ಗೆಲ್ಲಿಸಿದ ಸಿದ್ಧಾರ್ಥ್ ಕೌಲ್ ಹಾಗೂ ಭುವನೇಶ್ವರ್ ಕುಮಾರ್ ಅವರು ಶ್ಲಾಘನೆಗೆ ಅರ್ಹರು’ ಎಂದು ಭಾರತ ತಂಡದ ನಾಯಕ ಹೇಳಿದರು.</p>.<p>‘ಬೌಲಿಂಗ್ ವಿಭಾಗದಲ್ಲಿ ಸನ್ರೈಸರ್ಸ್ ತಂಡವು ಅತ್ಯಂತ ಬಲಿಷ್ಠವಾಗಿದೆ. ಆದರೆ, ಎಲ್ಲ ವಿಭಾಗಗಳನ್ನೂ ಪರಿಗಣಿಸಿದರೆ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಶಕ್ತಿಯುತವಾಗಿವೆ’ ಎಂದು ಅವರು ತಿಳಿಸಿದರು.</p>.<p><strong>‘ಗುರಿಯು ಸವಾಲಿನಿಂದ ಕೂಡಿತ್ತು’:</strong> ‘ಬೌಲಿಂಗ್ಗೆ ಹೆಚ್ಚು ಅನುಕೂಲಕರವಾಗಿದ್ದ ಆ ಪಿಚ್ನಲ್ಲಿ 150 ರನ್ಗಳ ಗುರಿಯು ಹೆಚ್ಚು ಸವಾಲಿನಿಂದ ಕೂಡಿ<br /> ರುತ್ತದೆ’ ಎಂದು ಸನ್ರೈಸರ್ಸ್ ತಂಡದ ಕೇನ್ ವಿಲಿಯಮ್ಸನ್ ಹೇಳಿದರು.</p>.<p>‘ಬ್ಯಾಟಿಂಗ್ ಮಾಡಲು ಅಂಗಳಕ್ಕಿಳಿಯುವ ಮುಂಚೆಯೇ 150 ರನ್ಗಳನ್ನು ಗಳಿಸಿದರೆ ಎದುರಾಳಿಗಳನ್ನು ಕಟ್ಟಿಹಾಕಬಹುದು ಎಂಬ ಯೋಜನೆ ಸಿದ್ಧಪಡಿಸಿಕೊಂಡಿದ್ದೆವು’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>