<p><strong>ಕಲಬುರಗಿ</strong>: ನಿಜಶರಣ ಅಂಬಿಗರ ಚೌಡಯ್ಯ ಅವರ 906ನೇ ಜಯಂತ್ಯುತ್ಸವವನ್ನು ನಗರದಲ್ಲಿ ಬುಧವಾರ ಅದ್ದೂರಿಯಾಗಿ ಆಚರಿಸಲಾಯಿತು. </p><p>ನಗರದ ನಗರೇಶ್ವರ ಶಾಲೆಯಿಂದ ಅಂಬಿಗರ ಚೌಡಯ್ಯ ಚಿತ್ರವುಳ್ಳ ರಥದ ಮೆರವಣಿಗೆಗೆ ಡಾ.ಎಸ್.ಎಂ.ಪಂಡಿತ್ ರಂಗಮಂದಿರದ ತನಕ ಮೆರವಣಿಗೆ ನಡೆಯಿತು. </p><p>ಮೆರವಣಿಗೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸುಲು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.</p><p>ಮೆರವಣಿಗೆಯು ನಗರದ ಚೌಕ ಪೊಲೀಸ್ ಸ್ಟೇಷನ್ ವೃತ್ತ ತಲುಪಿದಾಗ ಹೆಲಿಕಾಪ್ಟರ್ ನಿಂದ ಗುಲಾಬಿ ಪಕಳೆಗಳ ವೃಷ್ಟಿಗೈಯಲಾಯಿತು.</p><p><strong>ಮೇಳೈಸಿದ ಕಲಾ ಸೊಬಗು</strong>: ವಿವಿಧ ಕಲಾ ತಂಡಗಳು ಮೆರವಣಿಗೆ ಅಂದ ಹೆಚ್ಚಿಸಿದವು. </p><p>ಐದು ಒಂಟೆಗಳು, ಐದು ಕುದುರೆಗಳು, ಪುರುಷ ಹಾಗೂ ಮಹಿಳಾ ಡೊಳ್ಳಿನ ತಂಡಗಳು,, ಗಾರುಡಿ ಗೊಂಬೆಗಳ ಕುಣಿತ ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿತು.</p><p>ಸಮುದಾಯದ ನೂರಾರು ಯುವಕರು ಕೈಯಲ್ಲಿ ಚೌಡಯ್ಯ ಚಿತ್ರವುಳ್ಳ ಬಾವುಟ ಹಿಡಿದು ಹೆಜ್ಜೆಹಾಕಿದರು. ಕಿವಿಗಡಚ್ಚಿಕ್ಕುವ ಧ್ವನಿವರ್ಧಕಗಳಿಂದ ಹೊಮ್ಮುತ್ತಿರುವ ಹಾಡುಗಳಿಗೆ ಯುವಜನರು ಹೆಜ್ಜೆ ಹಾಕಿ ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ನಿಜಶರಣ ಅಂಬಿಗರ ಚೌಡಯ್ಯ ಅವರ 906ನೇ ಜಯಂತ್ಯುತ್ಸವವನ್ನು ನಗರದಲ್ಲಿ ಬುಧವಾರ ಅದ್ದೂರಿಯಾಗಿ ಆಚರಿಸಲಾಯಿತು. </p><p>ನಗರದ ನಗರೇಶ್ವರ ಶಾಲೆಯಿಂದ ಅಂಬಿಗರ ಚೌಡಯ್ಯ ಚಿತ್ರವುಳ್ಳ ರಥದ ಮೆರವಣಿಗೆಗೆ ಡಾ.ಎಸ್.ಎಂ.ಪಂಡಿತ್ ರಂಗಮಂದಿರದ ತನಕ ಮೆರವಣಿಗೆ ನಡೆಯಿತು. </p><p>ಮೆರವಣಿಗೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸುಲು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.</p><p>ಮೆರವಣಿಗೆಯು ನಗರದ ಚೌಕ ಪೊಲೀಸ್ ಸ್ಟೇಷನ್ ವೃತ್ತ ತಲುಪಿದಾಗ ಹೆಲಿಕಾಪ್ಟರ್ ನಿಂದ ಗುಲಾಬಿ ಪಕಳೆಗಳ ವೃಷ್ಟಿಗೈಯಲಾಯಿತು.</p><p><strong>ಮೇಳೈಸಿದ ಕಲಾ ಸೊಬಗು</strong>: ವಿವಿಧ ಕಲಾ ತಂಡಗಳು ಮೆರವಣಿಗೆ ಅಂದ ಹೆಚ್ಚಿಸಿದವು. </p><p>ಐದು ಒಂಟೆಗಳು, ಐದು ಕುದುರೆಗಳು, ಪುರುಷ ಹಾಗೂ ಮಹಿಳಾ ಡೊಳ್ಳಿನ ತಂಡಗಳು,, ಗಾರುಡಿ ಗೊಂಬೆಗಳ ಕುಣಿತ ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿತು.</p><p>ಸಮುದಾಯದ ನೂರಾರು ಯುವಕರು ಕೈಯಲ್ಲಿ ಚೌಡಯ್ಯ ಚಿತ್ರವುಳ್ಳ ಬಾವುಟ ಹಿಡಿದು ಹೆಜ್ಜೆಹಾಕಿದರು. ಕಿವಿಗಡಚ್ಚಿಕ್ಕುವ ಧ್ವನಿವರ್ಧಕಗಳಿಂದ ಹೊಮ್ಮುತ್ತಿರುವ ಹಾಡುಗಳಿಗೆ ಯುವಜನರು ಹೆಜ್ಜೆ ಹಾಕಿ ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>