ಭದ್ರಾವತಿ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್ಎಲ್) ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ಇ.ಡಿ) ವಿವೇಕ್ ಗುಪ್ತಾ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಹಲವು ವರ್ಷಗಳಿಂದ ಈ ಹುದ್ದೆಯ ನೇಮಕಾತಿ ನನೆಗುದಿಗೆ ಬಿದ್ದಿತ್ತು. ಕೇಂದ್ರ ಉಕ್ಕು ಸಚಿವ ಚೌಧರಿ ಬಿರೇಂದ್ರ ಸಿಂಗ್ ಅವರು ಕಾರ್ಖಾನೆಗೆ ಈಚೆಗೆ ಭೇಟಿ ನೀಡಿದ ನಂತರ ಪೂರ್ಣಾವಧಿಗೆ ಇ.ಡಿ ನೇಮಕ ಮಾಡಿರುವುದು ಕಾರ್ಮಿಕರ ಪಾಲಿಗೆ ಒಂದಿಷ್ಟು ನೆಮ್ಮದಿ ತಂದಿದೆ.