ಮುಗಳಖೋಡ: ಈಚೆಗೆ ಸುರಿದ ಮಳೆ– ಗಾಳಿಯಿಂದ ಮುಗಳಖೋಡ ಕ್ರಾಸ್ ಹತ್ತಿರದ ಶ್ರೀಪಾಲ ಬಾಬನ್ನವರ ಅವರ ಮನೆಯ ಚಾವಣಿ ಹಾರಿಹೋಗಿ ಹಾನಿಯಾಗಿದೆ. ಚಾವಣಿ ಹಾರಿದ್ದರಿಂದ ಮನೆಯಲ್ಲಿನ ಧಾನ್ಯಗಳೆಲ್ಲ ತೊಯ್ದು ಹಾಳಾಗಿವೆ. ಟಿವಿ ಮತ್ತಿತರ ಎಲೆಕ್ಟ್ರಿಕ್ ವಸ್ತುಗಳು ಕೆಟ್ಟು ಹೋಗಿವೆ. ಮಕ್ಕಳ ಶಾಲಾ ಸಾಮಗ್ರಿಗಳು ಮತ್ತು ಗೃಹ ಬಳಕೆಯ ವಸ್ತುಗಳು ಹಾಳಾಗಿದ್ದು, ಮನೆ ಗೋಡೆಗಳು ಶಿಥಿಲಗೊಂಡಿವೆ.