ಈ ಸಮಿತಿಯಲ್ಲಿ ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್, ಲೋಕಸಭೆಯಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವ ವಿರೋಧ ಪಕ್ಷದ ನಾಯಕ ಮತ್ತು ಒಬ್ಬ ಕಾನೂನು ತಜ್ಞರು ಇರಬೇಕು. ಈ ಹಿಂದೆ ಹಿರಿಯ ವಕೀಲ ಪಿ.ಪಿ.ರಾವ್ ಅವರನ್ನು ಸರ್ಕಾರ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಆದರೆ ರಾವ್ ಅವರು 2017ರ ಸೆ. 11ರಂದು ನಿಧರಾದ ಕಾರಣ ಆ ಸ್ಥಾನ ತೆರವಾಗಿತ್ತು.