ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೀಟ್‌ ತೆಗೆದು ಹಾಕಿದ ಸುರೇಶ್‌ ಕುಮಾರ್‌; ಪ್ರಶ್ನೆಯಾಗಿಯೇ ಉಳಿದ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ

ಸದ್ಯ ಇಂಥ ಪಕ್ಷದಿಂದ ಹೊರಬಂದೆ: ಯಶವಂತ್‌ ಸಿನ್ಹಾ
Last Updated 16 ಮೇ 2018, 16:04 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಬೆಳಿಗ್ಗೆ 9:30ಕ್ಕೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಟ್ವೀಟಿಸಿದ್ದ ಬಿಜೆಪಿ ಮುಖಂಡ ಸುರೇಶ್‌ ಕುಮಾರ್‌ ಕೆಲ ಸಮಯದಲ್ಲಿ ಅದನ್ನು ತೆಗೆದು ಹಾಕಿದ್ದಾರೆ.

ಪ್ರಮಾಣ ವಚನ ಸ್ವೀಕಾರಕ್ಕೆ ಸಂಬಂಧಿಸಿದಂತೆ ರಾಜಭವನದಿಂದ ಅಧಿಕೃತವಾಗಿ ಪ್ರಕಟಣೆ ಬಂದಿಲ್ಲ. ಆದರೆ, ಬಿಜೆಪಿ ಮುಖಂಡ ಸುರೇಶ್‌ ಕುಮಾರ್‌ ಹಾಗೂ ಪಕ್ಷದ ಟ್ವಿಟರ್‌ ಹಾಗೂ ಫೇಸ್‌ಬುಕ್‌ ಖಾತೆಯಲ್ಲಿ ಪ್ರಮಾಣ ವಚನದ ಸಮಯವನ್ನು ಪ್ರಕಟಿಸಲಾಗಿತ್ತು.

ಮಾಧ್ಯಮಗಳಲ್ಲಿ ಈ ಪ್ರಕಟಣೆ ಬಿತ್ತರಗೊಂಡ ಕೆಲ ಸಮಯದಲ್ಲಿ ಅದನ್ನು ತೆಗೆದು ಹಾಕಲಾಗಿದೆ.

ಬಿಜೆಪಿ ತೊರೆದಿರುವ ಹಿರಿಯ ಮುಖಂಡ ಯಶವಂತ್‌ ಸಿನ್ಹಾ, ‘ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಪತನಗೊಳಿಸಲು ಮುಂದಾಗಿರುವ ಪಕ್ಷದಿಂದ ಸದ್ಯ  ಹೊರಗಿದ್ದೇನೆ. ಮುಂದಿನ ವರ್ಷ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷ ಬಹುಮತ ಪಡೆಯದಿದ್ದರೆ, ಇದೇ ಮಾರ್ಗವನ್ನೂ ಅಲ್ಲಿಯೂ ಅನುಸರಿಸಲಿದೆ. ದಯವಿಟ್ಟು ಈ ಎಚ್ಚರಿಕೆಯನ್ನು ಗಮನಿಸಿ’ ಎಂದು ಟ್ವೀಟ್‌ ಮಾಡಿದ್ದಾರೆ.

–ಯಶವಂತ್‌ ಸಿನ್ಹಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT