ಕಾರಟಗಿ: ‘ಕನಕಗಿರಿ ವಿಧಾನಸಭಾ ಕ್ಷೇತ್ರದ ಜನರು ನೀಡಿದ ತೀರ್ಪಿಗೆ ಬದ್ಧ. ನಮ್ಮ ಕಾರ್ಯಕರ್ತರ ಶ್ರಮಕ್ಕೆ, 10 ವರ್ಷದವರೆಗೆ ಜನರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವೆ. ನಮ್ಮ ಕಾರ್ಯಕರ್ತರು ಧೈರ್ಯಗೆಡದೇ ಇರಬೇಕು’ ಎಂದು ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.